Kalaburagi Rain: ಕಲಬುರಗಿಯಲ್ಲಿ ವರುಣನ ಆರ್ಭಟ, ಮನೆಗಳಿಗೆ ನುಗ್ಗಿದ ನೀರು

| Updated By: ಆಯೇಷಾ ಬಾನು

Updated on: Jul 20, 2023 | 12:55 PM

ಕಲಬುರಗಿ ಜಿಲ್ಲೆಯಾದ್ಯಂತ ತೀರ್ವ ಮಳೆ ಹಿನ್ನೆಲೆ ಸೇಡಂ, ಚಿಂಚೋಳಿ, ಚಿತ್ತಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ

ಕಲಬುರಗಿ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದು ಮನೆಗಳಿಗೆ ಮಳೆ ನೀರು ನುಗ್ಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದ ಬುಡುಗ ಜಂಗಮ ಭವಾನಿ ನಗರದಲ್ಲಿ ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇನ್ನು ಕಲಬುರಗಿ ಜಿಲ್ಲೆಯಾದ್ಯಂತ ತೀರ್ವ ಮಳೆ ಹಿನ್ನೆಲೆ ಸೇಡಂ, ಚಿಂಚೋಳಿ, ಚಿತ್ತಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯ ಹಿನ್ನಲೆ ಆಯಾ ತಾಲೂಕು ತಹಶಿಲ್ದಾರ್ ಸೂಚನೆ‌ ಮೇರೆಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶದಲ್ಲಿರೋ ಎತ್ತಪೋತ್ತ ಕಿರು ಜಲಪಾತ ತುಂಬಿ ಹರಿಯುತ್ತಿದೆ. ಕುಂಚಾವರಂ ಭಾಗದಲ್ಲಿ ಬಾರಿ ಮಳೆಯಿಂದ ಹಳ್ಳ ತುಂಬಿ ಹರಿಯುತ್ತಿದೆ.

Follow us on