Rains cause havoc: ಮೈಸೂರಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ವಾಟಾಳು ಗ್ರಾಮದ ಬಾಳೆತೋಟವೊಂದು ಸರ್ವನಾಶ!

|

Updated on: May 12, 2023 | 5:56 PM

ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಕಾತುರ ಮತ್ತು ಅತಂಕದಿಂದ ಎದುರು ನೋಡುತ್ತಿರುವ ಸರ್ಕಾರದ ಪ್ರತಿನಿಧಿಗಳಿಗೆ ಸೋಮಣ್ಣನ ಮೊರೆ ತಲುಪಲಾರದು.

ಮೈಸೂರು: ನಿನ್ನೆ ಮೈಸೂರು ಜಿಲ್ಲೆಯಲ್ಲಿ ಸುರಿದ ಮಳೆ ಈ ಬಾಳೆತೋಟವನ್ನು (banana plantation) ಅಕ್ಷರಶಃ ಧ್ವಂಸ ಮಾಡಿದೆ. ಜಿಲ್ಲೆಯ ಟಿ ನರಸೀಪುರದಲ್ಲಿರುವ ವಾಟಾಳು ಗ್ರಾಮದ ಜಯಮ್ಮನವರಿಗೆ (Jayamma) ಸೇರಿದ ಬಾಳೆ ತೋಟವಿದು. ಬೆಳೆಹಾನಿಯಿಂದ ಕಂಗಾಲಾಗಿರುವ ಜಯಮ್ಮನವರ ಮಗ ಸೋಮಣ್ಣ (Somanna) ನೆರವು ಕೋರಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಬಾಳೆ ಬೆಳೆಯಲು ರೂ. 15 ಲಕ್ಷ ಖರ್ಚು ಮಾಡಿರುವುದಾಗಿ ಹೇಳುವ ಸೋಮಣ್ಣ ಸುಮಾರು ರೂ. 35 ಲಕ್ಷಗಳಷ್ಟು ಇಳುವರಿ ಹಾಳಾಗಿದೆ ಎನ್ನುತ್ತಾರೆ. ವಿಧಾನಸಭಾ ಚುನಾವಣೆ ಫಲಿತಾಂಶವನ್ನು ಕಾತುರ ಮತ್ತು ಅತಂಕದಿಂದ ಎದುರು ನೋಡುತ್ತಿರುವ ಸರ್ಕಾರದ ಪ್ರತಿನಿಧಿಗಳಿಗೆ ಸೋಮಣ್ಣನ ಮೊರೆ ತಲುಪಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on