BZ Zameer Ahmed: ಸಿದ್ದಗಂಗಾ ಮಠ ಸಿದ್ದಲಿಂಗ ಶ್ರೀಗಳ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್!

|

Updated on: May 30, 2023 | 5:36 PM

ಸಚಿವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ ಸನ್ಮಾನಿಸುವುದರ ಜೊತೆಗೆ ಫಲಪುಷ್ಟಗಳನ್ನು ಸಮರ್ಪಿಸಿ ಗೌರವಿಸುತ್ತಾರೆ.

ತುಮಕೂರು: ವಸತಿ ಮತ್ತು ವಕ್ಪ್ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮಿಗಳ (Sri Shivakumar Swamiji) ಗದ್ದುಗೆ ದರ್ಶನ ಪಡೆದರಲ್ಲದೆ, ಸಿದ್ದಲಿಂಗ ಶ್ರೀಗಳನ್ನು (Sri Siddalinga seer) ಕಂಡು ಅವರ ಪಾದ ಮುಟ್ಟಿ ನಮಸ್ಕರಿಸಿದರು. ಸಚಿವರು ಪಾದ ಮುಟ್ಟಲು ಬಾಗಿದಾಗ ಸ್ವಾಮಿಗಳು ಅವರ ಬೆನ್ನು ತಟ್ಟಿ ಆಶೀರ್ವದಿಸಿದರು. ನಂತರ ಸಚಿವರು ತಮ್ಮ ಪರಿಚಯ ಹೇಳಿಕೊಳ್ಳಲು ಮುಂದಾದಾಗ ಶ್ರೀಗಳು ನಿಮ್ಮ ಬಗ್ಗೆ ಗೊತ್ತಿದೆ ಅನ್ನುತ್ತಾರೆ. ಸಚಿವರು ಸ್ವಾಮೀಜಿಯವರಿಗೆ ಶಾಲು ಹೊದಿಸಿ ಸನ್ಮಾನಿಸುವುದರ ಜೊತೆಗೆ ಫಲಪುಷ್ಟಗಳನ್ನು ಸಮರ್ಪಿಸಿ ಗೌರವಿಸುತ್ತಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on