ಬರಗಾಲ ನಟ್ಟನಡುವೆ 2.5 ಕಿಮೀ ದೂರದಿಂದ ಡ್ರೈನೇಜ್ ನೀರು ಬಳಸಿ, 30 ಲಕ್ಷ ರೂ ಮೆಣಸಿನಕಾಯಿ ಬೆಳೆದು ಸೈ ಎನ್ನಿಸಿಕೊಂಡ ರೈತ!

Edited By:

Updated on: Feb 22, 2024 | 4:16 PM

ಎಲ್ಲೆಡೆ ಬರಗಾಲ, ಮಳೆಯಿಲ್ಲದೇ ರೈತರು ಬೆಳೆಬಾರದೇ ಬರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಹಿಂಗಾರು ಮಳೆಯಾಗದೇ ಬೆಳೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ. ಅದರೆ ಇದೇ ಬರಕ್ಕೆ ವಿಜಯಪುರ ನಗರದ ಕೃಷಿಕ ಸ್ನೇಹಿತರು ಸೆಡ್ಡು ಹೊಡೆದಿದ್ದಾರೆ. ಅವರೇ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ. ಮಳೆ ಬರಲಿ ಬಿಡಲಿ ನಾವಂತೂ ಒಳ್ಳೆ ಬೆಳೆ ಬೆಳೆಯೋಣಾ ಎಂದು ವಿಶೀಷ್ಟ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.

ಎಲ್ಲೆಡೆ ಬರಗಾಲ, ಮಳೆಯಿಲ್ಲದೇ ರೈತರು ಬೆಳೆಬಾರದೇ ಬರಕ್ಕೆ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ. ಮುಂಗಾರು ಹಿಂಗಾರು ಮಳೆಯಾಗದೇ ಬೆಳೆ ಬಾರದೇ ಸಂಕಷ್ಟಕ್ಕೀಡಾಗಿದ್ದಾರೆ. ಅದರೆ ಇದೇ ಬರಕ್ಕೆ ವಿಜಯಪುರ ನಗರದ ಕೃಷಿಕ ಸ್ನೇಹಿತರು ಸೆಡ್ಡು ಹೊಡೆದಿದ್ದಾರೆ. ಅವರೇ ಮಲ್ಲಿಕಾರ್ಜುನ ಗಡಗಿ ಹಾಗೂ ಮಹೇಶ ಗುಲಗಂಜಿ. ಮಳೆ ಬರಲಿ ಬಿಡಲಿ ನಾವಂತೂ ಒಳ್ಳೆ ಬೆಳೆ ಬೆಳೆಯೋಣಾ ಎಂದು ವಿಶೀಷ್ಟ ಪ್ರಯೋಗ ಮಾಡಿ ಸಕ್ಸಸ್ ಕಂಡಿದ್ದಾರೆ.

ಉತ್ತಮ ಬೆಳೆಯನ್ನು ಬೆಳೆದು 30 ಲಕ್ಷ ರೂಪಾಯಿಗೂ ಆಧಿಕ ಮೌಲ್ಯದ ಮೆಣಸಿನಕಾಯಿ ಬೆಳೆದು ಮಾರಾಟ ಮಾಡಿದ್ದಾರೆ. ತಮ್ಮ ಜಮೀನಿನಿಂದ 2.5 ಕಿಲೋ ಮೀಟರ್ ದೂರದಲ್ಲಿ ಹರಿದು ಹೋಗುತ್ತಿದ್ದ ಅಂಡರ್ ಗ್ರೌಂಡ್ ಡ್ರೈನೇಜ್ ನೀರನ್ನು ಉಪಯೋಗಿಸಿಕೊಂಡು ಉತ್ತಮ ಮೆಣಸಿನಕಾಯಿ ಫಸಲು ಪಡೆದು ಲಾಭಗಳಿಸಿದ್ದಾರೆ. ಇವರು ಹೇಗೆಲ್ಲಾ ಯುಜಿಡಿ ನೀರನ್ನು ಬಳಕೆ ಮಾಡಿಕೊಂಡರು. ಎಷ್ಟೆಲ್ಲಾ ಖರ್ಚು ಮಾಡಿದರು. ಫಸಲು ಎಲ್ಲಿ ಮಾರಾಟ ಮಾಡಿ ಎಷ್ಟೆಲ್ಲಾ ಮಾಡಿಕೊಂಡರು ಎಂಬಿತ್ಯಾದಿ ವಿಚಾರಗಳ ಕುರಿತು ನಮ್ಮ ವಿಜಯಪುರ ಜಿಲ್ಲಾ ಪ್ರತಿನಿಧಿ ಅಶೋಕ ಯಡಳ್ಳಿ ನೀಡಿರೋ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More