Daily Devotional: ಶಿಶು ಮರಣಕ್ಕೆ ಶ್ರಾದ್ಧ ಕಾರ್ಯ ಮಾಡಬೇಕಾ?

Updated on: Aug 13, 2025 | 6:54 AM

ಶಿಶು ಮರಣಕ್ಕೆ ಶ್ರಾದ್ಧ ಕರ್ಮಗಳ ಅಗತ್ಯವೇ ಎಂಬುದರ ಕುರಿತು ಡಾ. ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ. ಪರಾಶರ ಸ್ಮೃತಿಯ ಪ್ರಕಾರ, ಕೇಶಮುಂಡನವಾದ ಮಕ್ಕಳಿಗೆ ಶ್ರಾದ್ಧ ಕರ್ಮಗಳು ಅಗತ್ಯ. ಹಲ್ಲು ಬಾರದ ಮಕ್ಕಳಿಗೆ ಯಾವುದೇ ಶ್ರಾದ್ಧ ಅಥವಾ ಅಗ್ನಿಸಂಸ್ಕಾರ ಅಗತ್ಯವಿಲ್ಲ. ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 13: ಪುರಾಣಗಳು ಮತ್ತು ಧರ್ಮಗ್ರಂಥಗಳನ್ನು ಆಧರಿಸಿ, ಹಲ್ಲು ಬಾರದ ಮಕ್ಕಳು ಆಕಸ್ಮಿಕವಾಗಿ ಮರಣಹೊಂದಿದರೆ ಯಾವುದೇ ವಿಶೇಷ ಕರ್ಮಗಳು ಅಗತ್ಯವಿಲ್ಲ. ಅವರನ್ನು ಭೂಮಿಯಲ್ಲಿ ಹೂಳಬೇಕು. ಕೇಶಮುಂಡನ ಮಾಡಿದ ಮಕ್ಕಳಿಗೆ ಮಾತ್ರ ಶ್ರಾದ್ಧ ಕರ್ಮಗಳು ಅಗತ್ಯ ಎಂದು ಪರಾಶರ ಸ್ಮೃತಿಯಲ್ಲಿ ಉಲ್ಲೇಖಿಸಲಾಗಿದೆ. 11 ವರ್ಷದೊಳಗಿನ ಮಕ್ಕಳ ಮರಣಕ್ಕೆ ಶ್ರಾದ್ಧ ಕರ್ಮಗಳು ಅಷ್ಟು ಶುಭವಲ್ಲ ಎಂದು ಸಹ ಹೇಳಲಾಗುತ್ತದೆ.