Chandrayaan-3 ಚಂದ್ರಯಾನ-3 ಮಿಷನ್ ಕುರಿತು ವಿವರಗಳನ್ನು ಹಂಚಿಕೊಂಡ ಬೆಂಗಳೂರು ಇಸ್ರೋ ವಿಜ್ಞಾನಿ

ಅರುಣ್​ ಕುಮಾರ್​ ಬೆಳ್ಳಿ

Updated on: Jul 14, 2023 | 4:08 PM

ಉಪಗ್ರಹ ಲಾಂಚ್ ವೆಹಿಕಲ್, ಭೂಮಿಯ ಕಕ್ಷೆ, ಚಂದ್ರನ ಕಕ್ಷೆ, ಗುರುತ್ವಾಕರ್ಷಣ ಶಕ್ತಿ ಮೊದಲಾದ ಪದಗಳು ಜನಸಾಮಾನ್ಯನ ಊಹೆಗೆ ನಿಲುಕಲಾರವು.

ಬೆಂಗಳೂರು: ಭಾರತದ ಬಾಹ್ಯಾಕಾಶ ವಿಜ್ಞಾನ ಇತಿಹಾಸದಲ್ಲಿ ಇವತ್ತು ಮತ್ತೊಂದು ಮೈಲಿಗಲ್ಲು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ (Satish Dhawan Space Centre) ಚಂದ್ರಯಾನ-3 (Chandrayaan-3) ಯಶಸ್ವೀಯಾಗಿ ಉಡಾವಣೆಗೊಂಡಿದೆ. ಚಂದ್ರಯಾನ-2 ಕೂದಲೆಳೆಯ ಅಂತರದಿಂದ ತನ್ನ ಮಿಷನ್ ನಲ್ಲಿ ವಿಫಲವಾದಾಗ ಧೃತಿಗೆಡೆದ ಇಸ್ರೋ ವಿಜ್ಞಾನಿಗಳು ಛಲಬಿಡದ ತ್ರಿವಿಕ್ರಮನ ಹಾಗೆ ಚಂದ್ರಯಾನ-3 ಅಣಿಗೊಳಿಸಿ ಚಂದ್ರನೆಡೆ ಉಡಾಯಿಸಿದ್ದಾರೆ. ಎಲ್ಲ ಭಾರತೀಯರಿಗೆ ಇದು ಹೆಮ್ಮೆಯ ದಿನ. ಬಾಹ್ಯಾಕಾಶ ವಿಜ್ಞಾನ (rocket science) ಸುಲಭಕ್ಕೆ ಅರ್ಥವಾಗುವಂಥದಲ್ಲ. ಉಪಗ್ರಹ ಲಾಂಚ್ ವೆಹಿಕಲ್, ಭೂಮಿಯ ಕಕ್ಷೆ, ಚಂದ್ರನ ಕಕ್ಷೆ, ಗುರುತ್ವಾಕರ್ಷಣ ಶಕ್ತಿ ಮೊದಲಾದ ಪದಗಳು ಜನಸಾಮಾನ್ಯನ ಊಹೆಗೆ ನಿಲುಕಲಾರವು. ಹಾಗಾಗೇ ಚಂದ್ರಯಾನ-3 ಮಿಷನ್ ಬಗ್ಗೆ ಸರಳವಾದ ಭಾಷೆಯಲ್ಲಿ ತಿಳಿಯಲು ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಇಸ್ರೋ ವಿಜ್ಞಾನಿ ಆನಂದ್ ಅವರನ್ನು ಮಾತಾಡಿಸಿದ್ದಾರೆ. ಚಂದ್ರಯಾನ-3, ಉಡಾವಣೆ ಮತ್ತು ಇತರ ಹಲವು ಸಂಗತಿಗಳನ್ನು ಅವರು ಅರ್ಥವಾಗುವಂತೆ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.