KMS hits back at HDK; ಕುಮಾರಸ್ವಾಮಿ ಹಿಟ್ ಅಂಡ್ ರನ್ ಪ್ರವೃತ್ತಿಯನ್ನು ಬಿಡಬೇಕು: ಕೆಎಂ ಶಿವಲಿಂಗೇಗೌಡ, ಶಾಸಕ

|

Updated on: Jul 04, 2023 | 1:51 PM

ಸಿಎಂ ಕಚೇರಿಯಲ್ಲಿ ರೂ. 30 ಲಕ್ಷ ಕೇಳುತ್ತಾರೆ ಅಂತ ಕುಮಾರಸ್ವಾಮಿ ಸುಖಾ ಸುಮ್ಮನೆ ಅರೋಪ ಮಾಡುತ್ತಾರೆ ಎಂದು ಗೌಡರು ಹೇಳಿದರು.

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ, ಅದ್ಯಾವ ವಿಡಿಯೋ ಅವರ ಬಳಿ ಇದೆಯೋ ಬಿಡುಗಡೆ ಮಾಡಲಿ, ಅವರನ್ನು ಯಾರಾದರೂ ತಡೆದಿದ್ದಾರಾ? ಎಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಖಾರವಾಗಿ ಪ್ರಶ್ನಿಸಿದರು. ಕುಮಾರಸ್ವಾಮಿ ತನ್ನ ವೈರಿಯೇನೂ ಅಲ್ಲ, ಆದರೆ ಹಿಟ್ ಅಂಡ್ ರನ್ ಪ್ರವೃತ್ತಿ (hit and run approach) ಅನುಸರಿಸುವುದು ಬೇಡ ಅಂತ ಅವರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಗೌಡರು ಹೇಳಿದರು. ಸಿಎಂ ಕಚೇರಿಯಲ್ಲಿ ರೂ. 30 ಲಕ್ಷ ಕೇಳುತ್ತಾರೆ ಅಂತ ಅವರು ಸುಖಾ ಸುಮ್ಮನೆ ಅರೋಪ ಮಾಡುತ್ತಾರೆ. ಹಿಂದೆ ತಾವು ಆರೋಪಗಳಿಗೆ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಲ್ಲಿಸಿ ಯಾರಿಗೆ ಎಲ್ಲಿ ಕಳಿಸಬೇಕೋ ಅಲ್ಲಿಗೆ ಕಳಿಸಿದ್ದರು, ಈಗಲೂ ಹಾಗೆ ಮಾಡಲಿ ಎಂದು ಶಿವಲಿಂಗೇಗೌಡ ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on