ಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡ ಬಗ್ಗೆ ಕಾಮೆಂಟ್ ಮಾಡೋದು ಮಾಜಿ ಪ್ರಧಾನಿಯಾಗಿ ಸರಿಯೆನಿಸದು: ಹೆಚ್ ಡಿ ದೇವೇಗೌಡ

|

Updated on: Sep 02, 2023 | 6:55 PM

ದೇವಸ್ಥಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಹೈಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡಿರುವ ಬಗ್ಗೆ ಮಾತಾಡುವುದು ಒಬ್ಬ ಮಾಜಿ ಪ್ರಧಾನ ಮಂತ್ರಿಯಾಗಿ ತಮಗೆ ಸರಿಯೆನಿಸದು ಅಂತ ಹೇಳಿದರು. ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಒಂದು ವಾಕ್ಯ ಮಾತ್ರ ತಮಗೆ ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಹಾಸನ: ಶ್ರಾವಣ ಮಾಸದ ಶನಿವಾರದಂದು ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ (HD Devegowda) ತಮ್ಮ ಕುಟುಂಬದ ಸದಸ್ಯರೊಂದಿಗೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ (Mavinakere Ranganath Swamy temple) ವಿಶೇಷ ಪೂಜೆ ಸಲ್ಲಿಸಿದರು. ಗೌಡರ ಕುಟುಂಬಕ್ಕೆ ಕೆಲ ಹಿನ್ನಡೆಗಳು ಕಳೆದ ಕೆಲ ದಿನಗಳಲ್ಲಿ ಎದುರಾಗಿವೆ. ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮೈಲ್ಡ್ ಸ್ಟ್ರೋಕ್ ಗೊಳಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನು (Prajwal Revanna) ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಈ ಬೆಳವಣಿಗೆಗಳಿಂದ ದೇವೇಗೌಡ ಮತ್ತು ಕುಟಂಬ ವಿಚಲಿತಗೊಂಡಿದೆ. ದೇವಸ್ಥಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಹೈಕೋರ್ಟ್ ತೀರ್ಪನ್ನು ಓದದೆ ಪ್ರಜ್ವಲ್ ಅನರ್ಹಗೊಂಡಿರುವ ಬಗ್ಗೆ ಮಾತಾಡುವುದು ಒಬ್ಬ ಮಾಜಿ ಪ್ರಧಾನ ಮಂತ್ರಿಯಾಗಿ ತಮಗೆ ಸರಿಯೆನಿಸದು ಅಂತ ಹೇಳಿದರು. ಅವರನ್ನು ಅನರ್ಹಗೊಳಿಸಲಾಗಿದೆ ಎಂಬ ಒಂದು ವಾಕ್ಯ ಮಾತ್ರ ತಮಗೆ ಗೊತ್ತಾಗಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on