ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

|

Updated on: Oct 03, 2023 | 4:22 PM

ಕಳೆದ ಸೀಸನ್​ಗಳಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆಗ ಸುದೀಪ್​ ಅವರು ಗರಂ ಆದರು. ‘ಟ್ರೋಲ್​ ಆದ ಸ್ಪರ್ಧಿಗಳು ಯಾರು ಎಂಬ ಹೆಸರನ್ನು ಹೇಳಿ’ ಎಂದು ಮಾಧ್ಯಮದವರಿಗೆ ಸುದೀಪ್​ ಒತ್ತಾಯಿಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

‘ಬಿಗ್ ಬಾಸ್​’ (Bigg Boss) ಎಂದರೆ ವಿವಾದಗಳು ಕಾಮನ್​. ಪ್ರತಿ ಬಾರಿಯೂ ಸ್ಪರ್ಧಿಗಳ ಆಯ್ಕೆ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಾಂಟ್ರವರ್ಸಿ ಮಾಡಿಕೊಂಡ ವ್ಯಕ್ತಿಗಳಿಗೆ ಈ ಶೋನಲ್ಲಿ ಮಣೆ ಹಾಕಲಾಗುತ್ತದೆ ಎಂಬ ಮಾತಿದೆ. ಇಂದು (ಅ.3) ಸುದ್ದಿಗೋಷ್ಠಿಯಲ್ಲಿ ಆ ಬಗ್ಗೆ ಪ್ರಸ್ತಾಪ ಆಯಿತು. ಕಳೆದ ಸೀಸನ್​ನಲ್ಲಿ ಸ್ಪರ್ಧಿಗಳ ಆಯ್ಕೆಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಿದೆ ಎಂಬ ಪ್ರಶ್ನೆ ಎದುರಾಯಿತು. ಆಗ ಕಿಚ್ಚ ಸುದೀಪ್​ (Kichcha Sudeep) ಅವರು ಗರಂ ಆದರು. ‘ಟ್ರೋಲ್​ ಆದ ಸ್ಪರ್ಧಿಗಳು ಯಾರು ಎಂಬ ಹೆಸರನ್ನು ಹೇಳಿ’ ಎಂದು ಮಾಧ್ಯಮದವರಿಗೆ ಸುದೀಪ್​ ಒತ್ತಾಯಿಸಿದರು. ‘ನೀವು ಮಾತನಾಡುತ್ತಿರುವುದು ಇನ್ನೊಬ್ಬರ ಬಗ್ಗೆ. ನೀವು ಹೆಸರು ಹೇಳಿದರೆ ಮಾತ್ರ ಉತ್ತರ ಕೊಡುತ್ತೇನೆ. ಅವರು ಯಾರದ್ದೋ ತಂದೆ-ತಾಯಿಯ ಮಕ್ಕಳು. ಯಾರದ್ದೋ ಗಂಡ, ಯಾರದ್ದೋ ಹೆಂಡತಿ. ಅವರ ಮನೆ ಒಳಗೆ ಏನು ನಡೆದಿತ್ತೋ ನಮಗೆ ಗೊತ್ತಾ? ಕ್ಲೀನ್ ಆಗೋಕೆ ಮತ್ತು ಅವರು ತಮ್ಮನ್ನು ಸಾಬೀತು ಮಾಡಿಕೊಳ್ಳೋಕೆ ಇದು ಇದು ಒಳ್ಳೆಯ ವೇದಿಕೆ. ಆ ಜಾಗದಲ್ಲಿ ನಾಳೆ ನೀವು ಇರಬಹುದು. ಆಗ ನಿಮ್ಮ ಪರವಾಗಿ ನಾವಿರುತ್ತೇವೆ. ಯಾರೋ ಟ್ರೋಲ್​ ಮಾಡಿರಬಹುದು. ಆದರೆ ನಿಮಗೆ ಜವಾಬ್ದಾರಿ ಇದೆ’ ಎಂದು ಖಡಕ್​ ಆಗಿ ಸುದೀಪ್​ (Sudeep) ಉತ್ತರ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on