ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

|

Updated on: Oct 05, 2024 | 7:02 PM

Bigg Boss Kannada Season 11: ಬಿಗ್​ಬಾಸ್ ಅನ್ನು ಮುಚ್ಚಿಸುವುದಾಗಿ, ಬಿಗ್​ಬಾಸ್ ಅನ್ನು ಎಕ್ಸ್​ಪೋಸ್ ಮಾಡುವುದಾಗಿ, ಬಿಗ್​ಬಾಸ್​ನ ಬಾಗಿಲು ಒಡೆಸುವುದಾಗಿ ಹೇಳಿದ್ದ ವಕೀಲ ಜಗದೀಶ್​ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಮಾತಿನ ಛಾಟಿ ಬೀಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಮನೆಯ ಒಳಗೆ ಜಗಳಗಳೇ ನಡೆಯುತ್ತಿವೆ. ಬಿಗ್​ಬಾಸ್ ಆರಂಭವಾದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಬಿಗ್​ಬಾಸ್ ಮೇಲೆ ಆವಾಜ್ ಹೊಡೆದರು. ‘ಬಿಗ್​ ಬಾಸ್ ಅನ್ನು ಎಕ್ಸ್​ಪೋಸ್ ಮಾಡ್ತೀನಿ’, ‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ಹೇಗೆ ನಡೆಸ್ತೀರ ನೋಡ್ತೀನಿ’ ಎಂದೆಲ್ಲ ಆವಾಜ್ ಹೊಡೆದಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಇಂದು ಈ ಸೀಸನ್​ನ ಮೊದಲ ವಾರದ ಪಂಚಾಯ್ತಿ ನಡೆದಿದ್ದು, ಸುದೀಪ್, ಲಾಯರ್ ಜಗದೀಶ್​ಗೆ ಖಡಕ್​ ಆಗಿ ಪ್ರತ್ಯುತ್ತರ ನೀಡಿದ್ದಾರೆ. ನಿಮ್ಮಪ್ಪನಾಣೆ ಬಿಗ್​ಬಾಸ್ ಅನ್ನು ಹಾಳುಮಾಡಲಾರಿರಿ ಎಂದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:02 pm, Sat, 5 October 24

Follow us on