Seer predicts disaster; ಜಾಗತಿಕ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಎದುರಾಗಲಿವೆ ಮೂರು ಆಪತ್ತುಗಳು: ಕೋಡಿಮಠದ ಶ್ರೀಗಳು
ರಾಜ್ಯಮಟ್ಟದಲ್ಲಿ ಕೆಲ ಅಪಾಯಗಳು ಎದುರಾಗಲಿದ್ದು ಅವು ಅಷ್ಟೇನೂ ಘಾತಕವಲ್ಲ ಎಂದದು ಶ್ರೀಗಳು ಹೇಳಿದರು. ದೈವಕೃಪೆಯಿಂದ ಈ ಅಪಾಯಗಳು ದೂರವಾಗುತ್ತವೆ ಎಂದು ಶ್ರೀಗಳು ಹೇಳಿದರು.
ಹುಬ್ಬಳ್ಳಿ: ಕೋಡಿಮಠದ ಶ್ರೀಗಳು (Seer of Kodi Mutt) ನುಡಿಯುಬ ಭವಿಷ್ಯ ಹಲವಾರು ಬಾರಿ ನಿಜವಾಗಿದೆ. ಇವತ್ತು ನಗರದಲ್ಲಿ ಮಾತಾಡಿದ ಅವರು ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಲಿದೆ ಮತ್ತು ಪ್ರವಾಹದಂಥ ಸ್ಥಿತಿ ಕೂಡ ನಿರ್ಮಾಣಗೊಳ್ಳುವ ಸ್ಥಿತಿಯೂ ಇದೆ ಎಂದು ಹೇಳಿ ಮಳೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದರು. ಆದರೆ ಜಾಗತಿಕ (global), ರಾಷ್ಟ್ರ (national) ಮತ್ತು ರಾಜ್ಯಮಟ್ಟದಲ್ಲಿ (state level) ಮೂರು ಭಾರೀ ಅನಾಹುತಗಳು ಸಂಭವಿಸಲಿವೆ ಎಂದು ಹೇಳಿ ಜನರನ್ನು ಆತಂಕಕ್ಕೆ ಈಡು ಮಾಡಿದ್ದಾರೆ. ಶ್ರೀಗಳು ಹೇಳುವ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರೀ ಪ್ರಮಾಣದ ಜಲಪ್ರಳಯ ಸಂಭವಿಸಲಿದೆ ಮತ್ತು ಅದು ಒಂದೆರಡು ದೇಶಗಳನ್ನೇ ಮುಳುಗಡೆ ಮಾಡುವಷ್ಟು ಅಗಾಧವಾಗಿರುತ್ತದೆ. ಜಾಗತಿಕ ಮಟ್ಟದಲ್ಲೇ ಎಲ್ಲೋ ಒಂದೆಡೆ ನಡೆಯುವ ದೊಡ್ಡ ಪ್ರಮಾಣದ ಸ್ಫೋಟ ಭಾರತದ ಪರಿಸರದ ಮೇಲೂ ಪರಿಣಾಮ ಬೀರಲಿದೆ. ರಾಷ್ಟ್ರಮಟ್ಟದಲ್ಲಿ ವಿಜಯದಶಮಿ ಮತ್ತು ಸಂಕ್ರಾತಿಯ ನಡುವೆ ಜಗತ್ತಿನ ಸಾಮ್ರಾಟರೇ ತಲ್ಲಣಿಸುವಂಥ ದುರ್ಘಟನೆ ನಡೆಯಲಿದೆ ಎಂದ ಶ್ರೀಗಳು, ಆಳುವ ನಾಯಕರು ಸಕಾಲದಲ್ಲಿ ಎಚ್ಚೆತ್ತುಕೊಂಡರೆ ಇದನ್ನು ತಪ್ಪಿಸಬಹುದು ಅಂದರು. ಮೂರನೇಯದಾಗಿ ರಾಜ್ಯಮಟ್ಟದಲ್ಲಿ ಕೆಲ ಅಪಾಯಗಳು ಎದುರಾಗಲಿದ್ದು ಅವು ಅಷ್ಟೇನೂ ಘಾತಕವಲ್ಲ ಎಂದದು ಶ್ರೀಗಳು ಹೇಳಿದರು. ದೈವಕೃಪೆಯಿಂದ ಈ ಅಪಾಯಗಳು ದೂರವಾಗುತ್ತವೆ ಎಂದು ಶ್ರೀಗಳು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ