ಬೆಳಗಾವಿ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ (Bhavani Revanna) ಅವರ ಕಾರು ಮತ್ತು ಬೈಕ್ ಒಂದರ ನಡುವೆ ಮೈಸೂರಿನ ಸಾಲಿಗ್ರಾಮ ಜಂಕ್ಷನ್ ಬಳಿ ಮೂರು ದಿನಗಳ ಹಿಂದೆ ನಡೆದ ಒಂದು ಅಪಘಾತದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅವರ ಕುಟುಂಬದವರು ರಕ್ಷಣೆಗೆ ಧಾವಿಸಿದ್ದಾರೆ. ಬೈಕ್ ಸವಾರನಿಗೆ (biker) ಭವಾನಿ ಅವರು ಅವಾಚ್ಯ ಪದಗಳಲ್ಲಿ ನಿಂದಿಸಿರೋದು ವಿಡಿಯೋದಲ್ಲಿ ದಾಖಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಬೆಳಗಾವಿಗೆ ಬಂದಿರುವ ಭವಾನಿಯವರ ಪತಿ ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರನ್ನು ಸುವರ್ಣ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳು ವಿಡಿಯೋ ಬಗ್ಗೆ ಕೇಳಿದಾಗ ಅವರು ತಪ್ಪೆಲ್ಲ ಬೈಕ್ ಸವಾರನ ಮೇಲೆ ಹೊರೆಸಿದರು. ಅವನು ಕುಡಿದು ಬೈಕ್ ಓಡಿಸುತ್ತಿದ್ದ ಅಂತಲೂ ಹೇಳಿದರು. ಅಲ್ಲಾ ಸಾರ್, ಮೇಡಂ ಮನಸ್ಸಿಗೆ ಬಂದಂತೆ ಬೈದಾಡಿದರಲ್ಲ ಅಂತ ಪತ್ರಕರ್ತರು ಹೇಳಿದಾಗ ತಮ್ಮ ವರಸೆ ಬದಲಾಯಿಸಿದ ರೇವಣ್ಣ ತನ್ನ ಪತ್ನಿಯ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುವೆ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ