Pradeep Eshwar: ವಿಧಾನಸೌಧ ಆವರಣದಲ್ಲಿ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸುತ್ತಿದ ಪ್ರದೀಪ್ ಈಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: May 22, 2023 | 4:50 PM

ಪ್ರದೀಪ್ ಹೊರತು ಪಡಿಸಿ ಶಿವಕುಮಾರ್ ಜೊತೆಗಿದ್ದವರೆಲ್ಲ ಹಣ್ಣು ತಿನ್ನುತ್ತಾರೆ. ಶಿವಕುಮಾರ್ ಅಲ್ಲಿಂದ ಹೊರಟಾಗಲೂ ಪ್ರದೀಪ್ ಹಿಂಬಾಲಿಸುತ್ತಾರೆ.

ಬೆಂಗಳೂರು: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೋದೆಡೆಯೆಲ್ಲ ಸದ್ದು ಮಾಡುತ್ತಿದ್ದಾರೆ. ಅವರು ಹೆಚ್ ಎ ಎಲ್ ಏರ್ಫೋಟ್ ಗೆ ಹೋದರೂ ಮಾಧ್ಯಮ ಕೆಮೆರಾಗಳ ಕಣ್ಮಣಿಯಾಗುತ್ತಾರೆ, ವಿಧಾನ ಸೌಧಕ್ಕೆ ಬಂದಾಗಲೂ ಅದೇ ಸ್ಥಿತಿ. ಇಂದು 16ನೇ ವಿಧಾನ ಸಭೆಯ ಅಧಿವೇಶನ ಆರಂಭವಾಗಿದೆ. ಶಾಸಕರೆಲ್ಲ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬ್ರೇಕ್ ನಲ್ಲಿ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಕೆಲ ಸದಸ್ಯರೊಂದಿಗೆ ಹೊರಬಂದಾಗ ಅವರ ಜೊತೆ ಪ್ರದೀಪ್ ಕೂಡ ಇದ್ದರು. ವಿಧಾನಸೌಧದ ಆವರಣದಲ್ಲಿರುವ ಹಾಪ್ ಕಾಮ್ಸ್ ಅಂಗಡಿಲ್ಲಿ ಶಿವಕುಮಾರ್ ಏಲಕ್ಕಿ ಬಾಳೆಹಣ್ಣು (yalakki banana) ತಿಂದು ಜ್ಯೂಸ್ ಕುಡಿಯುತ್ತಾರೆ. ಪ್ರದೀಪ್ ಹೊರತು ಪಡಿಸಿ ಶಿವಕುಮಾರ್ ಜೊತೆಗಿದ್ದವರೆಲ್ಲ ಹಣ್ಣು ತಿನ್ನುತ್ತಾರೆ. ಶಿವಕುಮಾರ್ ಅಲ್ಲಿಂದ ಹೊರಟಾಗಲೂ ಪ್ರದೀಪ್ ಹಿಂಬಾಲಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.