ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬಾರದು ಅಂತಿದೆಯಾ? ಶಾಸಕರು ತಮ್ಮ ತಮ್ಮ ಅಭಿಪ್ರಾಯ ಹೇಳುತ್ತಿರುತ್ತಾರೆ: ಎಸ್ ಎಸ್ ಮಲ್ಲಿಕಾರ್ಜುನ, ಸಚಿವ

|

Updated on: Nov 22, 2023 | 11:12 AM

ಜಾರಕಿಹೊಳಿ ಇದೇ ಅವಧಿಯಲ್ಲಿ ಸಿಎಂ ಅಗುತ್ತಾರಾ ಅಥವಾ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಆಗುತ್ತಾರಾ ಅಂತ ಕೇಳಿದರೆ, ಅಯ್ಯೋ ತಾನೇನು ಜ್ಯೋತಿಷಿಯೇ ಅನ್ನುತ್ತಾರೆ ಸಚಿವ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೆಲ್ಲ ಸಿಗಲಿದೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.

ದಾವಣಗೆರೆ: ಕಾಂಗ್ರೆಸ್ ನಾಯಕರಲ್ಲಿ ಇದೊಂದು ರಿವಾಜು ಹುಟ್ಟಿಕೊಂಡುಬಿಟ್ಟಿದೆ. ಕೆಲ ಶಾಸಕರು ತಮ್ಮ ನೆಚ್ಚಿನ ನಾಯಕನನ್ನು ಮುಂದಿನ ಮುಖ್ಯಮಂತ್ರಿ ಅಂತ ಹೇಳೋದು ಬಳಿಕ ಬೇರೆ ನಾಯಕರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವವರಾಗಿರುವವರು ಅದಕ್ಕೆ ಪ್ರತಿಕ್ರಿಯೆ ನೀಡೋದು! ನಿನ್ನೆ ಯರಗಟ್ಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸವದತ್ತಿಯ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ (Vishwas Vaidya) ಮುಂದಿನ ಮುಖ್ಯಮಂತ್ರಿ ಲೋಕೋಪಯೋಗಿ ಸಚಿವರಾಗಿರುವ ಸತೀಶ್ ಜಾರಕಿಹೊಳಿ (Satish Jarkiholi) ಅಂತ ಹೇಳಿದ್ದರು. ಹೌದಾ ಸರ್ ಅಂತ ಪತ್ರಕರ್ತರು ಸಚಿವ ಎಸ್ ಎಸ್ ಮಲ್ಲಿಕಾರ್ಜುನರನ್ನು (SS Mallikarjun) ನಗರದಲ್ಲಿ ಕೇಳಿದಾಗ, ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿರುತ್ತಾರೆ, ಅದರಲ್ಲಿ ತಪ್ಪೇನೂ ಇಲ್ಲ ಅಂತ ಹೇಳಿದರು. ಇದೇ ಅವಧಿಯಲ್ಲಿ ಅಗುತ್ತಾರಾ ಅಥವಾ ಮುಂದಿನ ವಿಧಾನಸಭಾ ಚುನಾವಣೆಯ ನಂತರ ಆಗುತ್ತಾರಾ ಅಂತ ಕೇಳಿದರೆ, ಅಯ್ಯೋ ತಾನೇನು ಜ್ಯೋತಿಷಿಯೇ ಅನ್ನುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಯಾರಿಗೆಲ್ಲ ಸಿಗಲಿದೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಮಲ್ಲಿಕಾರ್ಜುನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on