ನಾರಾಯಣ ಹಾಗೂ ಯಮುನಾ ಕೊಲೆ ಕೇಸ್: SITಗೆ ದೂರು ನೀಡಿದ ಮಾವುತನ ಮಕ್ಕಳು
ಧರ್ಮಸ್ಥಳದಲ್ಲಿ ಬುರುಡೆ ಕೇಸ್ಗೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನಿನ್ನೆ ಮತ್ತೆ ಹಲವರನ್ನ ವಿಚಾರಣೆ ನಡೆಸ್ತು.. ಗಿರೀಶ್ ಮಟ್ಟಣ್ಣನವರ್, ವಿಠ್ಠಲಗೌಡ, ಪ್ರದೀಪ್ ಗೌಡ, ಜಯಂತ್ ಹಾಗೂ ಯೂಟ್ಯೂಬರ್ ಗಳಾದ ಅಭೀಷೇಕ್ ಮತ್ತು ಕೇರಳ ಮೂಲದ ಮನಾಫ್ನನ್ನ ವಿಚಾರಣೆ ನಡೆಸಿದರು. ಈ ಮಧ್ಯೆ ಆನೆ ಮಾವುತ ನಾರಾಯಣರ ಮಕ್ಕಳು ಮತ್ತೆ ದೂರು ನೀಡಿದ್ದಾರೆ.
ಮಂಗಳೂರು, ಸೆಪ್ಟೆಂಬರ್ 11: ಧರ್ಮಸ್ಥಳ ಆನೆ ಮಾವುತ ನಾರಾಯಣ ಹಾಗೂ ತಂಗಿ ಯಮುನಾ ಕೊಲೆ ಕೇಸ್ ಸಂಬಂಧ, ನಾರಾಯಣ ಪುತ್ರ ಗಣೇಶ ಹಾಗೂ ಪುತ್ರಿ ಭಾರತಿ SITಗೆ ಮತ್ತೆ ದೂರು ನೀಡಿದ್ದಾರೆ.. ಹೈಕೋರ್ಟ್ನಲ್ಲಿ ಕೇಸ್ ಇದ್ದ ಹಿನ್ನೆಲೆಯಲ್ಲಿ ದೂರು ತೆಗೆದುಕೊಳ್ಳಲು ಆಗವುದಿಲ್ಲ ಅಂತ ಎಸ್ಐಟಿ ಹೇಳಿತ್ತು.. ಇದೀಗ, ಹೈಕೋರ್ಟ್ನಿಂದ ದೂರು ಹಿಂಪಡೆದು ಮತ್ತೆ SITಗೆ ದೂರು ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 11, 2025 11:31 AM
Loading...
Unable to load recommendations.
Follow Us
