ಯಾವುದೆ ಕಾರ್ಯಕ್ಕೂ ಒಳ್ಳೆ ಮತ್ತು ಕೆಟ್ಟ ಸಮಯ ಇರುತ್ತದೆ. ಕೆಟ್ಟೆ ಘಟನೆ ಸಂಭವಿಸಿದರೆ ಸಮಯ ಸರಿ ಇಲ್ಲ ಎನ್ನುತ್ತೇವೆ. ಒಳ್ಳೆ ಕಾರ್ಯ ಮಾಡುವಾಗ ಈ ಸಮಯ ತುಂಬಾ ಚೆನ್ನಾಗಿದೆ ಎಂದು ಮುಂದುವರೆಯುತ್ತೇವೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿವೆ. ಹಾಗೆ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿವೆ. ಅಪಘಾತಕ್ಕೆ ಹಲವು ರೀತಿಯ ಕಾರಣಗಳಿವೆ. ಅದು ಅತಿ ವೇಗ, ಸಂಚಾರಿ ನಿಯಮ ಉಲ್ಲಂಘನೆ, ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ನಿದೆಗಣ್ಣಿನಲ್ಲಿ ವಾಹನ ಚಲಾಯಿಸುವುದು ಹೀಗೆ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ರಸ್ತೆಯಲ್ಲಿ ಹೋಗುವಾಗ ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಆದರೆ ಈ ಅಪಘಾತಕ್ಕೂ ನಮ್ಮ ಗ್ರಹಗತಿಗೂ ಸಂಬಂಧವಿದೆ ಎನ್ನುತ್ತಾರೆ. ಹಾಗಾದರೆ ವಾಹನ ಅಪಘಾತದಿಂದ ಪಾರಾಗಲು ಏನು ಮಾಡಬೇಕು? ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ….
Published On - 6:58 am, Fri, 1 March 24