ಬೆಂಗಳೂರು: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (H Vishwanath) ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಲಿರುವ ವಿಷಯ ಜಗಜ್ಜಾಹೀರಾಗಿದೆ. ಅದು ಸರಿ, ಅವರು ಪ್ರತಿದಿನ ಒಬ್ಬೊಬ್ಬ ಬಿಜೆಪಿ ನಾಯಕ (BJP leaders) ಮೇಲೆ ಹರಿಹಾಯುವುದು ಯಾಕೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ. ಪಕ್ಷದಲ್ಲಿರುವಾಗ ಅವರು ಯಾರ ಬಗ್ಗೆಯೂ ಮಾತಾಡುತ್ತಿರಲಿಲ್ಲ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ವಿಶ್ವನಾಥ ಅವರು ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರನ್ನು ಟಾರ್ಗೆಟ್ ಮಾಡಿ, ಅವನು ರೂ. 15,000 ಕೋಟಿ ಲೂಟಿ ಹೊಡೆದ ಬಗ್ಗೆ ಯಾರಾದರೂ ಮಾತಾಡಿದ್ರಾ ಅಂತ ಕೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:32 pm, Wed, 8 March 23