ಅಪರೇಶನ್ ಹಸ್ತ ಡಿಕೆ ಶಿವಕುಮಾರ್ ಆಡುತ್ತಿರುವ ಒಂದು ನಾಟಕ, ಬೇರೇನೂ ಅಲ್ಲ: ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ

|

Updated on: Sep 04, 2023 | 6:07 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ 20-25 ಹಿರಿಯ ಕಾಂಗ್ರೆಸ್ ಶಾಸಕರು, ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ್ದರು. ಅದನ್ನು ಪಕ್ಷಕ್ಕಾದ ಅವಮಾನ ಎಂದು ಪರಿಗಣಿಸಿದ ಮಹಾನಾಯಕ ಅದನ್ನು ಜನರಿಂದ ಮತ್ತು ವಿರೋಧ ಪಕ್ಷಗಳಿಂದ ಮುಚ್ಚಿಡಲು ಅಪರೇಷನ್ ಹಸ್ತದ ನಾಟಕ ನಡೆಸುತ್ತಿದ್ದಾರೆ. ಅಸಲಿಗೆ ಅದರಲ್ಲಿಅಂಥದ್ದೇನೂ ಇಲ್ಲ ಎಂದು ರಮೇಶ್ ಹೇಳಿದರು

ಬೆಳಗಾವಿ: ವಿಧಾನ ಸಭಾ ಚುನಾವಣೆಯ (Assembly Polls) ಬಳಿಕ ಹೆಚ್ಚು ಕಡಿಮೆ ನಾಪತ್ತೆಯಂತಾಗಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಇಂದು ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದರು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ಈಗಲೂ ಮಹಾನಾಯಕನೆಂದೇ ವ್ಯಂಗ್ಯವಾಗಿ ಸಂಬೋಧಿಸುವ ಜಾರಕಿಹೊಳಿ, ಶಿವಕುಮಾರ್ ಆಪರೇಶನ್ ಹಸ್ತ ನಡೆಸುತ್ತಿರುವುದಕ್ಕೆ ಮೂಲ ಕಾರಣ ಏನು ಅಂತ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ 20-25 ಹಿರಿಯ ಕಾಂಗ್ರೆಸ್ ಶಾಸಕರು, ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಸಭೆ ನಡೆಸಿದ್ದರು. ಅದನ್ನು ಪಕ್ಷಕ್ಕಾದ ಅವಮಾನ ಎಂದು ಪರಿಗಣಿಸಿದ ಮಹಾನಾಯಕ ಅದನ್ನು ಜನರಿಂದ ಮತ್ತು ವಿರೋಧ ಪಕ್ಷಗಳಿಂದ ಮುಚ್ಚಿಡಲು ಅಪರೇಷನ್ ಹಸ್ತದ ನಾಟಕ ನಡೆಸುತ್ತಿದ್ದಾರೆ. ಅಸಲಿಗೆ ಅದರಲ್ಲಿಅಂಥದ್ದೇನೂ ಇಲ್ಲ, ಯಾವುದೇ ಬಿಜೆಪಿ ಶಾಸಕ ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Mon, 4 September 23

Follow us on