Karnataka Transport Strike; ಹುಬ್ಬಳ್ಳಿಯ ಕಿಮ್ಸ್​ಗೆ ಚಿಕಿತ್ಸೆಗೆಂದು ಬಂದವರಿಗೆ ವಾಪಸ್ಸು ಹೋಗಲು ಬಸ್ಸಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Aug 05, 2025 | 3:11 PM

ಬೆನ್ನು ನೋವಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ಬಂದಿರುವ ಮಹಿಳೆಯೊಬ್ಬರು ವೈದ್ಯರನ್ನು ಕಂಡು ಔಷಧಿ ಮಾಡಿಸಿಕೊಂಡಿದ್ದಾರೆ, ಬರುವಾಗ ಆಟೋದಲ್ಲಿ ಬಂದವರು ವಿದ್ಯಾಪೇಟೆಗೆ ವಾಪಸ್ಸು ಹೋಗಲು ಬಸ್​​ಗಾಗಿ ಕಾಯುತ್ತಿದ್ದಾರೆ. ಆಟೋದವರು ಪ್ರಾಯಶಃ ದುಪ್ಪಟ್ಟು ಹಣ ಕೇಳಿರಬಹುದು. ಮತ್ತೊಬ್ಬ ಮಹಿಳೆಗೆ ಬಂಕಾಪುರಕ್ಕೆ ಹೋಗಬೇಕಿದೆ, ಇವತ್ತಿನ ತಮ್ಮ ಪ್ರಯಾಣವನ್ನೇ ರದ್ದು ಮಾಡಿ ನಾಳೆಗೆ ಮುಂದೂಡಿದ್ದಾರೆ. ನಾಳೆ ಬಸ್ ಸಂಚಾರ ಆರಂಭವಾಗಿತ್ತೋ ಇಲ್ಲವೋ ಗೊತ್ತಿಲ್ಲ.

ಹುಬ್ಬಳ್ಳಿ, ಆಗಸ್ಟ್ 5: ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಾಷ್ಟಾವಧಿ ಮುಷ್ಕರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆಗಳ ಮುಂದೆ ಜನ ಕಾಣದ ಬಸ್ಸು ಮತ್ತು ಸರ್ಕಾರ ಮಾಡಿರುವ ಪರ್ಯಾಯ ವ್ಯವಸ್ಥೆಗಾಗಿ ಕಾಯುತ್ತಿದ್ದಾರೆ, ಆದರೆ ಅವರಿಗಾಗಿ ಕಾಯುತ್ತಿರೋದು ನಿರಾಶೆ ಮಾತ್ರ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ (KIMS, Hubballi) ಈ ಭಾಗದ ಏಮ್ಸ್ ಇದ್ದಂತೆ. ಪ್ರತಿದಿನ ಇಲ್ಲಿಗೆ ಸಾವಿರಾರು ರೋಗಿಗಳು ಬರುತ್ತಾರೆ. ಕಿಮ್ಸ್ ಮುಂದಿರುವ ಬಸ್ ನಿಲ್ದಾಣದಲ್ಲಿ ಬೇರೆ ಬೇರೆ ಊರಿಗಳಿಗೆ ಹೋಗಬೇಕಿರುವ ಜನ ಇದ್ದಾರೆ. ಉಳ್ಳವರು ಆಟೋ, ಕ್ಯಾಬ್ ಅಥವಾ ತಮ್ಮ ಸ್ವಂತ ವಾಹನಗಳಲ್ಲಿ ವಾಪಸ್ಸು ಹೋಗಿದ್ದಾರೆ. ಆದರೆ ಸರ್ಕಾರೀ ಬಸ್​ಗಳನ್ನು ನೆಚ್ಚಿಕೊಂಡವರು ಮಾತ್ರ ತಮ್ಮ ಅದೃಷ್ಟದ ಪರೀಕ್ಷೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:  ಆಗಸ್ಟ್​ 5 ರಂದು ಸಾರಿಗೆ ನೌಕರರು ಬಸ್ ಸಂಚಾರ​ ಬಂದ್ ಮಾಡಿ ಮನೆಯಿಂದಲೇ ಪ್ರತಿಭಟನೆ: ಅನಂತ ಸುಬ್ಬರಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.