PM Modi in ISRO, Bengaluru: ವಿಜ್ಞಾನಿಗಳನ್ನು ಅಭಿನಂದಿಸುವ ಮೊದಲು ಪ್ರಧಾನಿ ಮೋದಿ ‘ಜೈ ವಿಗ್ಯಾನ್ ಜೈ ಅನುಸಂಧಾನ’ ಘೋಷವಾಕ್ಯ ದೇಶಕ್ಕೆ ನೀಡಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2023 | 12:24 PM

ಅಲ್ಲಿಂದ ಪೀಣ್ಯದ ಇಸ್ರೋ ಐಎಸ್ ಟಿಅರ್ ಎಸಿಗೆ ತೆರಳುವ ಮುನ್ನ ಪ್ರಧಾನಿ ಮುಂದೆ ಜನರನ್ನು ಉದ್ದೇಶಿಸಿ ಮಾತಾಡಿದರಲ್ಲದೆ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದ ಹಾಗೆ ‘ಜೈ ವಿಗ್ಯಾನ್ ಜೈ ಅನುಸಂಧಾನ್’ ಉಕ್ತಿಯನ್ನು ದೇಶಕ್ಕೆ ನೀಡಿದರು. ಪ್ರಧಾನಿ ದೆಹಲಿಗೆ ವಾಪಸ್ಸು ಹೋಗುವಾಗಲೂ ವಿಮಾನ ನಿಲ್ದಾಣದ ಹೊರಗಡೆ ಸಹಸ್ರಾರು ಜನ ಹಾಜರಿದ್ದರು.

ಬೆಂಗಳೂರು:  ಶನಿವಾರ ಬೆಳಗಿನ ಜಾವ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಸಮಾರು 3 ಗಂಟೆಗಳ ಕಾಲ ನಗರದಲ್ಲಿದ್ದ ಬಳಿಕ ವಾಪಸ್ಸು ದೆಹಲಿಗೆ ತೆರಳಿದರು. ಚಂದ್ರಯಾನ-3 ವಿಕ್ರಮ ಲ್ಯಾಂಡರ್ (Chandrayaan-3 Vikram Lander ) ಅನ್ನು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳನ್ನು ಅಭಿನಂದಿಸಲು ಅತ್ಯಂತ ಕಾತುರರಾಗಿದ್ದ ಪ್ರಧಾನ ಮಂತ್ರಿಯವರು ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ (South Africa and Greece) ಪ್ರವಾಸದ ಮೂಲಕ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅವರನ್ನು ಬೆಂಗಳೂರಲ್ಲಿ ಬರಮಾಡಿಕೊಳ್ಳಲು, ಹಲವಾರು ಬಿಜೆಪಿ ನಾಯಕರು ಜೊತೆ ಅಸಂಖ್ಯಾತ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದರು. ಅಲ್ಲಿಂದ ಪೀಣ್ಯದ ಇಸ್ರೋ ಐಎಸ್ ಟಿಅರ್ ಎಸಿಗೆ (ISRO Telemetry Tracking and Command Network) ತೆರಳುವ ಮುನ್ನ ಪ್ರಧಾನಿ ಮುಂದೆ ಜನರನ್ನು ಉದ್ದೇಶಿಸಿ ಮಾತಾಡಿದರಲ್ಲದೆ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯದ ಹಾಗೆ ‘ಜೈ ವಿಗ್ಯಾನ್ ಜೈ ಅನುಸಂಧಾನ್’ ಉಕ್ತಿಯನ್ನು ದೇಶಕ್ಕೆ ನೀಡಿದರು. ಪ್ರಧಾನಿ ದೆಹಲಿಗೆ ವಾಪಸ್ಸು ಹೋಗುವಾಗಲೂ ವಿಮಾನ ನಿಲ್ದಾಣದ ಹೊರಗಡೆ ಸಹಸ್ರಾರು ಜನ ಹಾಜರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.