ಕೇಸರಿ ಶಾಲು, ರುದ್ರಾಕ್ಷಿ ಹಾರ ಹಾಕಿ ನರೇಂದ್ರ ಮೋದಿಯನ್ನು ಸ್ವಾಗತಿಸಿದ ನಳಿನ್ ಕುಮಾರ್ ಕಟೀಲ್

|

Updated on: May 03, 2023 | 1:15 PM

ಕೇಸರಿ ಶಾಲು, ಪೇಟ ತೊಡಿಸಿ ಮೋದಿ ಅವರನ್ನು ಕಟೀಲು ಸನ್ಮಾನಿಸಿದರು. ದ.ಕನ್ನಡ ಜಿಲ್ಲೆ ವಿಶೇಷ ವಾಸ್ತುಶಿಲ್ಪದ ಗಣಪತಿ ಮೂರ್ತಿ ನೀಡಿ ಗೌರವಿಸಲಾಯಿತು.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ದ.ಕನ್ನಡ ಜಿಲ್ಲೆ ಮೂಡಬಿದಿರೆ ಕ್ಷೇತ್ರದ ಮುಲ್ಕಿಯಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಂಡಿದ್ದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲು, ಸಚಿವ ಸುನೀಲ್ ಕುಮಾರ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಕೇಸರಿ ಶಾಲು, ಪೇಟ ತೊಡಿಸಿ ಮೋದಿ ಅವರನ್ನು ಕಟೀಲು ಸನ್ಮಾನಿಸಿದರು. ದ.ಕನ್ನಡ ಜಿಲ್ಲೆ ವಿಶೇಷ ವಾಸ್ತುಶಿಲ್ಪದ ಗಣಪತಿ ಮೂರ್ತಿ ನೀಡಿ ಗೌರವಿಸಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಸಾದ ನೀಡಿದ ಶಾಸಕ ಹರೀಶ್ ಪೂಂಜಾ.

Follow us on