Loading video

ಫೈನಾನ್ಸ್ ಕಿರುಕುಳದಿಂದ ಸಾವಿಗೆ ಶರಣಾದ ವ್ಯಕ್ತಿಯ ತಾಯಿಯನ್ನು ಭೇಟಿಯಾದ ಪೊಲೀಸ್ ಕಮೀಶನರ್

|

Updated on: Feb 19, 2025 | 6:08 PM

ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಮಾಡಿರುವ ಶಶಿಕುಮಾರ್ ಶಿವಾನಂದನ ತಾಯಿಗೆ ಸಾಂತ್ವನ ಹೇಳುವಾಗ, ಸಾಲ ವಸೂಲಾತಿಗೆ ಬರುವ ಸಿಬ್ಬಂದಿ ಕಿರುಕುಳ ನೀಡಿದರೆ ಅದನ್ನು ಕೂಡಲೇ ಪೊಲೀಸರ ಗಮನಕ್ಕೆ ತರಬೇಕು, ಇಲ್ಲದಿದ್ದರೆ ಪೊಲೀಸರಿಗೆ ಗೊತ್ತಾಗೋದು ಹೇಗೆ? ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ ತೆಗೆದುಕೊಳ್ಳಲು ಸಹಾಯವಾಗುತ್ತದೆ ಎಂದು ಹೇಳಿದರು.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ ಇಂದು ಕಿಮ್ಸ್ ಆವರಣಕ್ಕೆ ತೆರಳಿ ಮೈಕ್ರೋ ಫೈನಾನ್ಸ್ ಸಂಸ್ಥೆಯೊಂದರ ಸಿಬ್ಬಂದಿಯು ನೀಡುತ್ತಿದ್ದ ಕಿರುಕುಳ ತಾಳಲಾಗದೆ ಹುಬ್ಬಳ್ಳಿಯ ಉಣ್ಕಲ್ ಕೆರೆಗೆ ಹಾರಿ ಪ್ರಾಣಬಿಟ್ಟನೆಂದು ಹೇಳಲಾಗುತ್ತಿರುವ ಶಿವಾನಂದ ಕಳ್ಳೀಮನಿಯ ತಾಯಿ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ಶಿವಾನಂದನ ಸಾವಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದರು. ಶಶಿಕುಮಾರ್ ಅವರನ್ನು ಕಂಡೊಡನೆ ಕಿಮ್ಸ್ ಶವಾಗಾರದ ಆವರಣದಲ್ಲಿ ಕೂತು ಮಗನ ಸಾವಿಗೆ ಒಂದೇ ಸಮನೆ ರೋದಿಸುತ್ತಿದ್ದ ತಾಯಿ ಕಾಲಿಗೆ ಬೀಳಲು ಮುಂದಾಗುತ್ತಾರೆ. ಅಧಿಕಾರಿಯು ಸಾಲ ಮತ್ತು ಸಾವಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅವರಿಂದ ಪಡೆಯುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸುಗ್ರೀವಾಜ್ಞೆ ಜಾರಿಗೆ ಬಂದರೂ ನಿಲ್ಲದ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ, ಹುಬ್ಬಳ್ಳಿಯಲ್ಲಿ ಒಬ್ಬ ವ್ಯಕ್ತಿ ಬಲಿ