ವಿಜಯಪುರದ ಪ್ರೇಮ-ಕಾಮ-ವಂಚನೆ ಪ್ರಕರಣದಲ್ಲಿ ಪೊಲೀಸಪ್ಪನೇ ಆರೋಪಿ! ದೂರು ದಾಖಲಾದ ಬಳಿಕ ನಾಪತ್ತೆ

ಅರುಣ್​ ಕುಮಾರ್​ ಬೆಳ್ಳಿ

Updated on: Jan 25, 2024 | 10:56 AM

ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನವರಿಕೆಯಾದ ನಂತರ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಂಪ್ಲೇಂಟ್ ದಾಖಲಾಗಿದ್ದು ಗೊತ್ತಾದ ಕೂಡಲೇ ಯುವತಿ ಎದುರು ಪೌರುಷ ಮೆರೆದಿದ್ದ ಪೊಲೀಸ್ ಪೇದೆ ಬಾಲ ಮುದುರಿಕೊಂಡು ಬಿಲ ಸೇರಿಕೊಂಡಿದ್ದಾನೆ.

ವಿಜಯಪುರ: ಒಬ್ಬ ಪೊಲೀಸಪ್ಪನ ಪ್ರೇಮ-ಕಾಮ-ವಂಚನೆ ಪ್ರಕರಣ ಇದು. ಅದೇನೋ ಹೇಳ್ತಾರಲ್ಲ ಮೋಸ ಹೋಗೋರು ಇರೋವರೆಗೂ ಮೋಸ ವಂಚನೆಯ (betrayal) ಪ್ರಕರಣಗಳು ನಡೆಯುತ್ತಿರುತ್ತವೆ! ಇದು ವಿಜಯಪುರದಲ್ಲಿ (Vijayapura) ನಡೆದಿರುವ ಪ್ರಕರಣ. ಈ ಯುವತಿ ಮಾಡುತ್ತಿರುವ ಆರೋಪಗಳ ಪ್ರಕಾರ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುವ ವಿನಾಯಕ ಟಕ್ಕಳಕಿ (Vinayaka Takkalaki) ಮದುವೆಯಾಗುವ ಭರವಸೆ ನೀಡಿ ಆಕೆಯ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಅಕೆಯೊಂದಿಗೆ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗಲು ನಿರಾಕರಿಸಿದ್ದಾನೆ. ವಿನಾಯಕನಿಗೆ ಬೇರೆ ಯುವತಿಯರ ಜೊತೆಯೂ ಸ್ನೇಹವಿದೆ ಎಂದು ಯುವತಿ ಹೇಳುತ್ತಾಳೆ. ಅವನು ಮದುವೆಯಾಗಲು ಒಲ್ಲೆ ಅಂದ ಬಳಿಕ ಯುವತಿ ಪರಿಪರಿಯಾಗಿ ಬೇಡಿಕೊಂಡಿದ್ದು ಸತ್ಯ. ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನವರಿಕೆಯಾದ ನಂತರ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಂಪ್ಲೇಂಟ್ ದಾಖಲಾಗಿದ್ದು ಗೊತ್ತಾದ ಕೂಡಲೇ ಯುವತಿ ಎದುರು ಪೌರುಷ ಮೆರೆದಿದ್ದ ಪೊಲೀಸ್ ಪೇದೆ ಬಾಲ ಮುದುರಿಕೊಂಡು ಬಿಲ ಸೇರಿಕೊಂಡಿದ್ದಾನೆ. ಕಳೆದ 20 ದಿನಗಳಿಂದ ಅವನು ನಾಪತ್ತೆಯಾಗಿದ್ದಾನಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.