Karnataka Assembly Polls: ಹೆಚ್ ಡಿ ಕುಮಾರಸ್ವಾಮಿಯ ಹೆಲಿಕಾಪ್ಟರ್ ಕಾಯುತ್ತಿದ್ದ ಪೊಲೀಸರು ಅದರ ಮುಂದೆ ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡರು!

Updated on: Apr 10, 2023 | 3:18 PM

ಕುಮಾಸ್ವಾಮಿ ಚಾಪರ್ ನಿಂದ ಇಳಿದು ಸಮಾವೇಶಕ್ಕೆ ಹೋದಾಗ ಅದನ್ನು ಕಾಯಲು ನಿಂತಿದ್ದ ಪೊಲೀಸರು ಉಕ್ಕಿನ ಹಕ್ಕಿಯೊಂದಿಗೆ ಮನಸಾರೆ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ,

ಕೋಲಾರ: ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಇಲ್ಲಿರುವ ಪೊಲೀಸರಿಗೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy) ಮುಳಬಾಗಿಲಿನ ಶಿನೆಗೇನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಪಂಚರತ್ನ ಯಾತ್ರೆ (Pancharatna Yatre) ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದಾಗ ಏನ್ ಮಾಡ್ತಾ ಇದ್ರಿ ಅಂತ ಕೇಳಿದರೆ, ಸರ್ ಹೆಲಿಕಾಪ್ಟರ್ (helicopter) ಮುಂದೆ ನಿಂತು ಸೆಲ್ಫೀ ತಗೊಳ್ತಾ ಇದ್ವಿ, ಅಂತ ಇವರು ಹೇಳಬಹುದೆ? ತಮಾಷೆಗೆ ಹೇಳಿದ್ದು ಮಾರಾಯ್ರೇ. ವೃತ್ತಿಯಲ್ಲಿ ಪೊಲೀಸರರಾದರೇನು? ಜನ ಸಾಮಾನ್ಯರಂತೆ ಅವರಿಗೂ ಸೆಲ್ಫೀ ಗೀಳು ಇರುತ್ತೆ ತಾನೇ? ಹಾಗಾಗಿ ಕುಮಾಸ್ವಾಮಿ ಚಾಪರ್ ನಿಂದ ಇಳಿದು ಸಮಾವೇಶಕ್ಕೆ ಹೋದಾಗ ಅದನ್ನು ಕಾಯಲು ನಿಂತಿದ್ದ ಪೊಲೀಸರು ಉಕ್ಕಿನ ಹಕ್ಕಿಯೊಂದಿಗೆ ಮನಸಾರೆ ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More