ಹುಟ್ಟಿದ ಪ್ರತಿಯೊಬ್ಬರೂ ಸಾಯಲೇ ಬೇಕು. ಆದರೆ ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಅತಿ ದುಃಖ ಹಾಗೂ ಆಳವಾದ ಭಾವನಾತ್ಮಕ ಅನುಭವವಾಗಿದೆ. ಅದು ನಮಗೆ ಆಳವಾದ ನೋವನ್ನು ತರುತ್ತದೆ. ಮನೆಯಲ್ಲಿ ಯಾರಾದರು ಮೃತಪಟ್ಟರೆ ಮೃತಪಟ್ಟ ದಿನದಿಂದ 13 ದಿನಗಳ ವರೆಗಿನ ಸಮಯ ಅತಿ ಮುಖ್ಯ. ಅವರ ಆತ್ಮಕ್ಕೆ ಶಾಂತಿ ಸಿಗುಲು ಈ ದಿನಗಳಲ್ಲಿ ನಾವು ಮಾಡುವ ಕಾರ್ಯಗಳು ಅತಿ ಮುಖ್ಯವಾಗಿವೆ. ಸಾವಿನ ಮನೆಯಲ್ಲಿ ಪಾಲಿಸಬೇಕಾದ ಶಿಷ್ಟಾಚಾರದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ವಿಶೇಷ ಮಾಹಿತಿಯನ್ನು ನೀಡಿದ್ದಾರೆ.
ಸಾವಿನ ಮನೆಯಲ್ಲಿ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ನಮ್ಮ ಬಟ್ಟೆ, ಹಾಸಿಗೆ ಅಥವಾ ಹೊದಿಕೆಗಳು ಕೂಡ ಒಳ್ಳೆಯ ಮತ್ತು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ. ಬಟ್ಟೆ ಇಟ್ಟುಕೊಳ್ಳುವ ಮತ್ತು ಧರಿಸುವ ವಿಧಾನವು ತಪ್ಪಾಗಿದ್ದರೆ, ಖಂಡಿತವಾಗಿಯೂ ನಕಾರಾತ್ಮಕ ಶಕ್ತಿಯ ಪರಿಣಾಮವು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸಾವಿನ ಮನೆಯಲ್ಲಿ ಬಿಳಿ ಬಟ್ಟೆಯೇ ಧರಿಸಬೇಕು ಎನ್ನಲಾಗುತ್ತೆ. ಈ ಬಗ್ಗೆ ಗುರೂಜಿ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ