ಸುಳ್ಳು ಸ್ವಾಮಿ ಪ್ರಣವಾನಂದ್​ಗೆ ಬಿಟ್ಟಿ ಪ್ರಚಾರ ನೀಡಲು ನಾನು ತಯಾರಿಲ್ಲ: ಮಧು ಬಂಗಾರಪ್ಪ, ಸಚಿವ

|

Updated on: Sep 16, 2023 | 5:52 PM

ಅಸಲಿಗೆ, ಈ ಸ್ವಾಮಿಯ ಹಿನ್ನೆಲೆ ಏನು ಅಂತ ಪತ್ತೆ ಮಾಡಿ, ಅವರು ಬಂದಿದ್ದು ಎಲ್ಲಿಂದ, ಸಾರ್ವಜನಿಕವಾಗಿ ಕಣ್ಣೀರು ಹಾಕೋದು ಯಾಕೆ ಮೊದಲಾದ ಸಂಗತಿಗಳನ್ನು ಪತ್ತೆ ಹಚ್ಚಿ ಅಂತ ಸಚಿವ ಹೇಳಿದರು. ಧರ್ಮದ ಹೆಸರಲ್ಲಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುವ ಇಂಥವರಿಗೆಲ್ಲ ಫುಟೇಜ್ ನೀಡಬೇಡಿ, ತನ್ನೊಂದಿಗೆ ನಡೆಸಿರುವ ಈ ಮಾತುಕತೆಯನ್ನೂ ದಯವಿಟ್ಟು ಪ್ರಸಾರ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಮಧು ಬಂಗಾರಪ್ಪ (Madhu Bangarappa) ಅವರಿಂದ ನನಗೆ ಜೀವ ಬೆದರಿಕೆ ಇದೆ ಅಂತ ಪ್ರಣವಾನಂದ ಸ್ವಾಮೀಜಿ (Pranavananda Swamiji) ಆರೋಪಿಸಿದರೆ, ಅವರೊಬ್ಬ ಸುಳ್ಳು ಸ್ವಾಮಿ, ಅವರ ಬಗ್ಗೆ ಪ್ರಶ್ನೆ ಕೇಳಿ ದಯವಿಟ್ಟು ನನ್ನ ಸಮಯ ಹಾಳು ಮಾಡಬೇಡಿ, ಸ್ವಾಮಿಗೆ ಬಿಟ್ಟಿ ಪ್ರಚಾರ ನೀಡಲು ನಾನು ತಯಾರಿಲ್ಲ, ಮಾಡಲು ನನಗೆ ಬೇಕಾದಷ್ಟು ಕೆಲಸವಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಅಸಹನೆಯಿಂದ ಹೇಳುತ್ತಾರೆ. ನಗರದಲ್ಲಿಂದು ಮಾಧ್ಮಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಧು ಬಂಗಾರಪ್ಪ, ತಾನ್ಯಾವತ್ತೂ ಬಿಕೆ ಹರಿಪ್ರಸಾದ ಬಗ್ಗೆ ಮಾತಾಡಿಲ್ಲ, ತಾನು ಈಡಿಗ ಸಮಾಜದವನ್ನು ಅನ್ನೋದಕ್ಕಿಂತ ಹೆಚ್ಚು ಮನುಷ್ಯ ಜಾತಿಗೆ ಸೇರಿದವನು ಅಂತ ಹೇಳಿಕೊಳ್ಳಲು ಇಷ್ಟಪಡುತ್ತೇನೆ ಅಂತ ಹೇಳಿದರು. ಅಸಲಿಗೆ, ಈ ಸ್ವಾಮಿಯ ಹಿನ್ನೆಲೆ ಏನು ಅಂತ ಪತ್ತೆ ಮಾಡಿ, ಅವರು ಬಂದಿದ್ದು ಎಲ್ಲಿಂದ, ಸಾರ್ವಜನಿಕವಾಗಿ ಕಣ್ಣೀರು ಹಾಕೋದು ಯಾಕೆ ಮೊದಲಾದ ಸಂಗತಿಗಳನ್ನು ಪತ್ತೆ ಹಚ್ಚಿ ಅಂತ ಸಚಿವ ಹೇಳಿದರು. ಧರ್ಮದ ಹೆಸರಲ್ಲಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುವ ಇಂಥವರಿಗೆಲ್ಲ ಫುಟೇಜ್ ನೀಡಬೇಡಿ, ತನ್ನೊಂದಿಗೆ ನಡೆಸಿರುವ ಈ ಮಾತುಕತೆಯನ್ನೂ ದಯವಿಟ್ಟು ಪ್ರಸಾರ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on