ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಸಚಿವ ಮಧು ಬಂಗಾರಪ್ಪರಿಂದ ನನಗೆ ಜೀವ ಬೆದರಿಕೆ ಇದೆ: ಪ್ರಣವಾನಂದ್ ಸ್ವಾಮೀಜಿ
ತಾನ್ಯಾವತ್ತಾದರೂ ಹೆಂಡತಿ ಮಗುವನ್ನು ಕರೆದುಕೊಂಡು ಸಚಿವರ ಮನೆಗೆ ಹೋಗಿದ್ದೀನಾ ಅಂತ ಕೇಳುವ ಸ್ವಾಮೀಜಿ ಮೂರು ಸಲ ಹೋದಾಗ ಅವರೇನು ಮಾಡಿದರು ಅಂತ ಅವರಿಗೆ ಗೊತ್ತಿದೆ ಅನ್ನುತ್ತಾರೆ! ಮಧು ಬಂಗಾರಪ್ಪರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿಡದಿದ್ದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳುವ ಸ್ವಾಮೀಜಿ, ಸಚಿವರು ಸಮಾಜ ಒಡೆಯುವ ಕೆಲಸ ಮಾಡಬಾರದು ಅನ್ನುತ್ತಾರೆ.
ಬೆಂಗಳೂರು: ಈಡಿಗ ಸಮುದಾಯದ ಪ್ರಣವಾನಂದ್ ಸ್ವಾಮೀಜಿ (Pranavananda Swamiji) ತಮ್ಮ ಸಮುದಾಯದವರೇ ಆಗಿರುವ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಿರುದ್ಧ ಕೆಂಡಕಾರಿದ್ದಾರೆ. ಸ್ವಾಮೀಜಿ ಮತ್ತು ಸಚಿವರ ನಡುವೆ ಪರಸ್ಪರ ದೋಷಾರೋಪಣೆ ಜಾರಿಯಲ್ಲಿದೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ವಾಮೀಜ, ಮಧು ಬಂಗಾರಪ್ಪರಿಂದ ತನಗ ಜೀವ ಬೆದರಿಕೆ (life threat) ಇದ್ದು ನಗರ ಪೊಲೀಸ್ ಅಯುಕ್ತರೊಂದಿಗೆ ದೂರು ದಾಖಲಿಸುವುದಾಗಿ ಹೇಳಿದರು. ತಾನು ಮದುವೆಯಾಗಿರುವುಸ ಸಚಿವರಿಗೆ ಯಾಕೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದ ಅವರುಮ ಅಣ್ಣ ಬಸವಣ್ಣ, ಸಪ್ತಋಷಿ, ವೇದವ್ಯಾಸರ-ಮೊದಲಾದವರೆಲ್ಲ ಮದುವೆ ಮಾಡಿಕೊಂಡಿದ್ದರು ಎಂದು ಹೇಳುತ್ತಾ ತಮ್ಮ ಮದುವೆಯನ್ನು ಸಮರ್ಥನೆ ಮಾಡಿಕೊಂಡರು. ತಾನ್ಯಾವತ್ತಾದರೂ ಹೆಂಡತಿ ಮಗುವನ್ನು ಕರೆದುಕೊಂಡು ಸಚಿವರ ಮನೆಗೆ ಹೋಗಿದ್ದೀನಾ ಅಂತ ಕೇಳುವ ಸ್ವಾಮೀಜಿ ಮೂರು ಸಲ ಹೋದಾಗ ಅವರೇನು ಮಾಡಿದರು ಅಂತ ಅವರಿಗೆ ಗೊತ್ತಿದೆ ಅನ್ನುತ್ತಾರೆ! ಮಧು ಬಂಗಾರಪ್ಪರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿಡದಿದ್ದರೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳುವ ಸ್ವಾಮೀಜಿ, ಸಚಿವರು ಸಮಾಜ ಒಡೆಯುವ ಕೆಲಸ ಮಾಡಬಾರದು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
