ಸೂರ್ಯನಿಗೆ ಬಳೆ ತೊಡಿಸಿದ ಬೆಳಕು, ಮೈಸೂರಿನಲ್ಲಿ ಅಪರೂಪದ ದೃಶ್ಯ ಸೆರೆ

| Updated By: ಆಯೇಷಾ ಬಾನು

Updated on: Sep 02, 2023 | 11:20 AM

ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದ ಬಳಿ ಸುತ್ತೂರು ನಂಜುಂಡನಾಯಕ ಅವರ ಕ್ಯಾಮೆರಾದಲ್ಲಿ ಅಪರೂಪದ ಚಿತ್ರ ಸೆರೆಯಾಗಿದೆ. ಸೂರ್ಯನ ಸುತ್ತ ಆಕರ್ಷಕ ಬಳೆಯ ಆಕಾರ ಗೋಚರವಾಗಿದೆ. ಬೆಳಕಿನ ವಕ್ರೀಭವನ, ಮೋಡದಲ್ಲಿನ ನೀರಿನ ಕಣಗಳಿಂದ ಈ ರೀತಿಯ ಉಂಗುರ ಸೃಷ್ಟಿಯಾಗಿದೆ ಎನ್ನಲಾಗಿದೆ.

ಮೈಸೂರು, ಸೆ.02: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮಹತ್ವಕಾಂಕ್ಷೆಯ ಆದಿತ್ಯ ಎಲ್‌1 ಮಿಷನ್ ಉಡಾವಣೆಗೆ ಸಕಲ ಸಿದ್ದತೆ ನಡೆದಿದೆ. ಮತ್ತೊಂದೆಡೆ ಮೈಸೂರಿನ ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಅಪರೂಪದ ಚಿತ್ರ ಸೆರೆಯಾಗಿದೆ. ನಂಜನಗೂಡು ತಾಲ್ಲೂಕು ಸುತ್ತೂರು ಗ್ರಾಮದ ಬಳಿ ಸುತ್ತೂರು ನಂಜುಂಡನಾಯಕ ಅವರ ಕ್ಯಾಮೆರಾದಲ್ಲಿ ಅಪರೂಪದ ಚಿತ್ರ ಸೆರೆಯಾಗಿದೆ. ಸೂರ್ಯನ ಸುತ್ತ ಆಕರ್ಷಕ ಬಳೆಯ ಆಕಾರ ಗೋಚರವಾಗಿದೆ. ಬೆಳಕಿನ ವಕ್ರೀಭವನ, ಮೋಡದಲ್ಲಿನ ನೀರಿನ ಕಣಗಳಿಂದ ಈ ರೀತಿಯ ಉಂಗುರ ಸೃಷ್ಟಿಯಾಗಿದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on