ಚಿಕ್ಕ ವಯಸ್ಸಿನಲ್ಲೇ ಏಕೆ ಹಾರ್ಟ್ ಅಟ್ಯಾಕ್ ಆಗುತ್ತೆ? ಖ್ಯಾತ ವೈದ್ಯ ಮಂಜುನಾಥ್ ಶಾಕಿಂಗ್ ಮಾಹಿತಿ
ಬ್ಯಾಂಕಾಕ್ಗೆ ಹೋದಾಗ ಹೃದಯಘಾತವಾಗಿ ಸ್ಪಂದನಾ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಚಿಕ್ಕ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಏಕೆ ಆಗುತ್ತೆ? ಎಂದು ಖ್ಯಾತ ವೈದ್ಯ ಮಂಜುನಾಥ್ ಶಾಕಿಂಗ್ ಮಾಹಿತಿ ನೀಡಿದ್ದಾರೆ.
ವಿಜಯ್ ರಾಘವೇಂದ್ರ (Vijay Raghavendra) ಅವರ ಪತ್ನಿ ಸ್ಪಂದನಾ ವಿದೇಶ ಪ್ರವಾದಲ್ಲಿದ್ದಾಗಲೇ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ, ಕುಟುಂಬಸ್ಥರ ಜೊತೆ ಸ್ಪಂದನಾ ಥೈಲ್ಯಾಂಡ್ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತವಾಗಿ ಭಾನುವಾರ (ಆಗಸ್ಟ್ 6) ನಿಧನರಾಗಿದ್ದಾರೆ. ವಿಜಯ್ ರಾಘವೇಂದ್ರ ಅವರ ಪತ್ನಿ ಸಾವು ಅನೇಕರಿಗೆ ಬರಸಿಡಿಲು ಬಡಿದಂತಾಗಿದೆ. ಇನ್ನು ಸ್ಪಂದನಾ ಅವರು ಹೃದಯಘಾತದಿಂದ ಸಾವನ್ನಪ್ಪಿರುವ ಬಗ್ಗೆ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.C.N.ಮಂಜುನಾಥ್ ಟಿವಿ9ಗೆ ಪ್ರತಿಕ್ರಿಯಿಸಿದ್ದು , ಸಣ್ಣ ವಯಸ್ಸಿನಲ್ಲಿ ಏಕೆ ಹೃದಯಾಘಾತವಾಗುತ್ತೆ ಎನ್ನುವ ಬಗ್ಗೆ ವಿವರಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Follow Us