Araga Jnanendra: ಆರಗ ಜ್ಞಾನೇಂದ್ರ ಬಣ್ಣದ ಮಾತಿಗೆ ತಕ್ಕ ಪಾಠ ಕಲಿಸ್ತೀವಿ- ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲ

| Updated By: ಸಾಧು ಶ್ರೀನಾಥ್​

Updated on: Aug 04, 2023 | 2:18 PM

Priyank Kharge: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಅವರು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ್​ ಖರ್ಗೆ ಅವರ ಬಣ್ಣದ ಬಗ್ಗೆ ನೀಡಿದ್ದ ವ್ಯಾಖ್ಯಾನಕ್ಕೆ ತಿರುಗೇಟು ನೀಡಿದರು.

ಕಲಬುರಗಿ, ಆಗಸ್ಟ್​​ 4: ಕಲಬುರಗಿ (Kalaburagi) ನಗರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು (Rural development Minister Priyank Kharge) ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್​ ಅವರು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಮಲ್ಲಿಕಾರ್ಜುನ್​ ಖರ್ಗೆ ಅವರ ಬಣ್ಣದ ಬಗ್ಗೆ ನೀಡಿದ್ದ ವ್ಯಾಖ್ಯಾನಕ್ಕೆ ತಿರುಗೇಟು ನೀಡಿದರು. ಆರಗ ಜ್ಞಾನೇಂದ್ರ ಬಣ್ಣದ ಮಾತಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾದರು.

ಆರಗ ಜ್ಞಾನೇಂದ್ರ ಬಣ್ಣದ ಮಾತು (color of the skin) ಕೇವಲ ಖರ್ಗೆ ಅವರಿಗೆ ಮಾಡಿರೋ ಅವಮಾನ ಅಲ್ಲಾ. ಕಲ್ಯಾಣ ಕರ್ನಾಟಕದವರ ಬಗ್ಗೆ ಅವರಿಗೆ ಅಸಹನೆ, ಅವಹೇಳನೆ ಇದೆ. ಅವರದ್ದು ಮನಸ್ಮೃತಿ ಮನಸ್ಥಿತಿ. ಅದು ಕೇಶವ ಕೃಪಾದ ಆರ್​ ಎಸ್​ ಎಸ್​​ ಮನಸ್ಥಿತಿ. ಮಲೆನಾಡಿನ ಕಡೆಯವರು ಪ್ರಬುದ್ಧರು ಅಂತ ಅಂದುಕೊಂಡಿದ್ದೇವೆ. ಹೀಗಾಗಿ ನಮ್ಮ ಮಕ್ಕಳನ್ನು ಆ ಕಡೆ ಓದಲು ಕಳಿಸುತ್ತೇವೆ. ಅವರ ಹೇಳಿಕೆ ನೋಡಿದ್ರೆ ನಮ್ಮ ಭಾಗದಲ್ಲಿಯೇ ನಮ್ಮ ಮಕ್ಕಳು ಓದಲಿ ಅನ್ನಿಸುತ್ತಿದೆ. ನಮ್ಮ ಭಾಗದವರು ದೊಡ್ಡ ಹುದ್ದೆ, ಸ್ಥಾನಕ್ಕೆ ಹೋಗಿದ್ದು ಅವರಿಗೆ ಸಹಿಸಲಾಗುತ್ತಿಲ್ಲ, ತಡೆದುಕೊಳ್ಳಲಾಗುತ್ತಿಲ್ಲಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

 

Follow us on