ಸಂಕಷ್ಟ ಚತುರ್ಥಿ: ದ್ವಾದಶ ರಾಶಿಗಳ ಈ ದಿನದ ಭವಿಷ್ಯ ಇಲ್ಲಿದೆ

Updated on: Aug 12, 2025 | 6:27 AM

ಡಾ. ಬಸವರಾಜ ಗುರೂಜಿಯವರು ಆಗಸ್ಟ್ 12, 2025 ರ ದಿನಭವಿಷ್ಯವನ್ನು ತಿಳಿಸಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆ ದಿನದ ಫಲಾಫಲ, ಅದೃಷ್ಟ ಸಂಖ್ಯೆ ಮತ್ತು ಶುಭ ಮಂತ್ರಗಳನ್ನು ವಿವರಿಸಲಾಗಿದೆ. ಉದ್ಯೋಗ, ಆರ್ಥಿಕ, ಆರೋಗ್ಯ ಹಾಗೂ ಇತರ ವಿಷಯಗಳ ಕುರಿತು ಮಾಹಿತಿ ನೀಡಲಾಗಿದೆ. ಈ ದಿನ ಸಂಕಷ್ಟ ಚತುರ್ಥಿ ಮತ್ತು ಮಂಗಳಗೌರಿ ವ್ರತದ ಮಹತ್ವವನ್ನೂ ಉಲ್ಲೇಖಿಸಲಾಗಿದೆ.

ಇಂದು ದಿನಾಂಕ 12 ಆಗಸ್ಟ್ 2025, ವಿಶ್ವಾವಸು ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣಪಕ್ಷ, ಪೂರ್ವಾಭಾದ್ರ ನಕ್ಷತ್ರ, ಶುಕರ್ಮ ಯೋಗ, ಭದ್ರಕರಣ ಇದೆ. ರಾಹುಕಾಲ 3.32 ರಿಂದ 5.4 ರ ವರೆಗೆ ಇರುತ್ತದೆ. ಸಂಕಲ್ಪಕಾಲ ಬೆಳಗ್ಗೆ 10:50 ರಿಂದ 12:34 ರವರೆಗೆ ಇರುತ್ತದೆ ಎಂದೂ ತಿಳಿಸಲಾಗಿದೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ 12 ರಾಶಿಗಳ ಫಲಾಫಲವನ್ನು ತಿಳಿಸಿದ್ದಾರೆ. ಪೂರ್ವಾಭಾದ್ರ ನಕ್ಷತ್ರದಲ್ಲಿ ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿರುವುದು ಈ ದಿನದ ಮುಖ್ಯ ಲಕ್ಷಣ. ಮೇಷ ರಾಶಿಯವರಿಗೆ 5 ಗ್ರಹಗಳ ಶುಭಫಲ, ವೃಷಭ ರಾಶಿಯವರಿಗೆ 6 ಗ್ರಹಗಳ ಶುಭಫಲ ಇರುವುದಾಗಿ ಹೇಳಲಾಗಿದೆ.

Follow Us
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More