ಶಿವಲಿಂಗೇಗೌಡರಿಗೆ ಪಕ್ಷದಲ್ಲಿ ಬೆಳೆಯುವಾಗ ಕಾಣದ ಕುಟುಂಬ ರಾಜಕಾರಣ ಪಕ್ಷ ತೊರೆಯುವಾಗ ಕಾಣುತ್ತಿದೆಯೇ? ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ

Updated on: Feb 28, 2023 | 6:15 PM

ಶಿವಲಿಂಗೇಗೌಡರು ಪಕ್ಷಲ್ಲಿ ಬೆಳೆಯುವಾಗ, ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು,

ಹಾಸನ: ಅರಸೀಕೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಲು ಸಿದ್ಧರಾಗಿರುವ ಕೆಎಮ್ ಶಿವಲಿಂಗೇಗೌಡರ (KM Shivalingegowda) ಮೇಲೆ ಹರಿಹಾಯ್ದರು. ಅವರು ತಮ್ಮ ಬಗ್ಗೆ ವಿಷಯಗಳನ್ನು ಬಹಿರಂಗಗೊಳಿಸುತ್ತೇನೆ ಅಂತ ಹೇಳುತ್ತ್ತಾರೆ, ಅವರನ್ನು ತಡೆಯತ್ತಿರುವರು ಯಾರು? ಧಾರಾಳವಾಗಿ ಬಿಚ್ಚಿಡಲಿ ಎಂದು ಕುಮಾರಸ್ವಾಮಿ ಹೇಳಿದರು. ಶಿವಲಿಂಗೇಗೌಡರು ಪಕ್ಷಲ್ಲಿ ಬೆಳೆಯುವಾಗ ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ (dynastic politics) ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರ ಬೆದರಿಕೆಗಳಿಗೆ ಬೇರೆ ಜನ ಹೆದರಬಹುದು, ತಾನು ಹೆದರುವವನಲ್ಲ ಎಂದು ಹೇಳಿದರು,

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 28, 2023 06:14 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.