ಹಾಸನ: ಅರಸೀಕೆರೆಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಲು ಸಿದ್ಧರಾಗಿರುವ ಕೆಎಮ್ ಶಿವಲಿಂಗೇಗೌಡರ (KM Shivalingegowda) ಮೇಲೆ ಹರಿಹಾಯ್ದರು. ಅವರು ತಮ್ಮ ಬಗ್ಗೆ ವಿಷಯಗಳನ್ನು ಬಹಿರಂಗಗೊಳಿಸುತ್ತೇನೆ ಅಂತ ಹೇಳುತ್ತ್ತಾರೆ, ಅವರನ್ನು ತಡೆಯತ್ತಿರುವರು ಯಾರು? ಧಾರಾಳವಾಗಿ ಬಿಚ್ಚಿಡಲಿ ಎಂದು ಕುಮಾರಸ್ವಾಮಿ ಹೇಳಿದರು. ಶಿವಲಿಂಗೇಗೌಡರು ಪಕ್ಷಲ್ಲಿ ಬೆಳೆಯುವಾಗ ನೆಲೆ ಕಂಡುಕೊಳ್ಳುವಾಗ ಕಾಣದ ಕುಟುಂಬ ರಾಜಕಾರಣ (dynastic politics) ಈಗ ಪಕ್ಷ ಬಿಟ್ಟು ಹೋಗುವಾಗ ಕಾಣುತ್ತಿದೆಯೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಅವರ ಬೆದರಿಕೆಗಳಿಗೆ ಬೇರೆ ಜನ ಹೆದರಬಹುದು, ತಾನು ಹೆದರುವವನಲ್ಲ ಎಂದು ಹೇಳಿದರು,
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:14 pm, Tue, 28 February 23