ಯೋಗೇಶ್ವರ್​ಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ, ಚನ್ನಪಟ್ಟಣ ನನ್ನ ಹುಟ್ಟೂರು: ಸೋಮಶೇಖರ್

Updated on: Nov 09, 2024 | 12:13 PM

ಸೋಮಶೇಖರ್ ರೆಬೆಲ್ ಬಿಜೆಪಿ ಶಾಸಕನ ಹಾಗೆ ಮಾತಾಡುತ್ತಾರೆ. ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಮತ ಯಚಿಸುತ್ತಿರುವುದನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಚನ್ನಪಟ್ಟಣ ನನ್ನ ಹುಟ್ಟೂರು, ಅಲ್ಲಿ ಯಾರಾದರೂ ಸಲಹೆ ಕೇಳಿದರೆ ಕೊಡುತ್ತೇನೆ, ಯೋಗೇಶ್ವರ್​ಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎಂದು ಶಾಸಕ ಹೇಳುತ್ತಾರೆ.

ಬೆಂಗಳೂರು: ಶೋಭಾ ಕರಂದ್ಲಾಜೆಯವರಿಗೆ ನನ್ನ ತಾಕತ್ತಿನ ಬಗ್ಗೆ ಮಾತಾಡುವ ಕಿಂಚಿತ್ತೂ ಯೋಗ್ಯತೆ ಇಲ್ಲ, ತಾಕತ್ತು ನೋಡಲೇಬೇಕು ಅಂತಾದರೆ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಮತ್ತು ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ, ಇಬ್ಬರೂ ಯಶವಂತಪುರದಲ್ಲಿ ಸ್ಪರ್ಧೆ ಮಾಡೋಣ, ಜನ ತಿರ್ಮಾನ ತೆಗೆದುಕೊಳ್ಳುತ್ತಾರೆ, ಅಗ ಯಾರ ತಾಕತ್ತು ಎಷ್ಟು ಅನ್ನೋದು ಗೊತ್ತಾಗುತ್ತದೆ, ಚಿಕ್ಕಮಗಳೂರು ಜನ ಉಗಿದಿದ್ದಕ್ಕೆ ಅವರು ಯಶವಂತಪುರ ಬರಬೇಕಾಯಿತು, ತಮ್ಮ ಕೆಲಸ ತಾವು ಮಾಡಿಕೊಂಡು ಸುಮ್ಮನಿರದಿದ್ದರೆ ಅವರ ಪಾಪದ ಕೊಡ ತುಂಬುತ್ತದೆ ಎಂದು ಶೋಭಾ ಕರಂದ್ಲಾಜೆ ತಮ್ಮ ವಿರುದ್ಧ ಮಾಡಿರುವ ಕಾಮೆಂಟ್​ಗೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಡಿಕೆ ಸುರೇಶ್ ಮನೆಯಲ್ಲಿ ಬಿಜೆಪಿ ಶಾಸಕರು-ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್!

Follow Us