ಮಕ್ಕಳಿಲ್ಲದಿದ್ದರೆ ಶ್ರಾದ್ಧ ಕರ್ಮ ಯಾರು ಮಾಡಬೇಕು?

|

Updated on: Mar 17, 2025 | 6:50 AM

ಶ್ರಾದ್ಧ ಕರ್ಮವು ಪಿತೃಗಳಿಗೆ ಗೌರವ ಮತ್ತು ಕೃತಜ್ಞತೆಯನ್ನು ಸೂಚಿಸುತ್ತದೆ. ಮಕ್ಕಳಿಲ್ಲದಿದ್ದರೆ, ಸಂಬಂಧಿಕರು ಅಥವಾ ಜ್ಯೋತಿಷಿಗಳ ಸಲಹೆಯಂತೆ ಶ್ರಾದ್ಧವನ್ನು ಮಾಡಬಹುದು. ಬಸವರಾಜ ಗುರೂಜಿ ಅವರು ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಶ್ರಾದ್ಧದ ಮಹತ್ವ ಮತ್ತು ಅದನ್ನು ಸರಿಯಾಗಿ ನಿರ್ವಹಿಸುವ ವಿಧಾನಗಳ ಬಗ್ಗೆ ಈ ಲೇಖನ ತಿಳಿಸುತ್ತದೆ. ದೇವರು ಮತ್ತು ಪಿತೃಗಳ ಆಶೀರ್ವಾದ ಪಡೆಯಲು ಶ್ರಾದ್ಧದ ಕರ್ಮ ಅತ್ಯಂತ ಮುಖ್ಯ.

ಪಿತೃಗಳಿಗೆ ಗೌರವವನ್ನು ಸೂಚಿಸುವ ಸಲುವಾಗಿ ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. ಪೂರ್ವಜರ ಋಣವನ್ನು ಕಳೆದುಕೊಳ್ಳಲು ಕೂಡ ಶ್ರಾದ್ಧ ಕಾರ್ಯ ಮಾಡಲಾಗುತ್ತದೆ. ಶ್ರಾದ್ಧ ಕಾರ್ಯ ಮಾಡುವುದರಿಂದ ಕೇವಲ ಪಿತೃಗಳು ಮಾತ್ರವಲ್ಲ, ದೇವರು ಕೂಡ ಸಂತೋಷಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಶದ್ಧಾ ಕಾರ್ಯ ಮಾಡಲು ಮಕ್ಕಳು ಇಲ್ಲದಿದ್ದರೆ ಯಾರು ಮಾಡಬಹುದು? ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.