ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸೋತಿಲ್ಲವೇ? ಪದ್ಮನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿದ್ದೇನೆ: ಆರ್ ಅಶೋಕ

Updated on: Nov 18, 2023 | 11:25 AM

ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಬೆಂಗಳೂರು: ಹದಿನಾರನೇ ವಿಧಾನ ಸಭೆ ರಚನೆಯಾಗಿ ಆರು ತಿಂಗಳು ನಂತರ ಬಿಜೆಪಿ ಹೈಕಮಾಂಡ್, ಹಿರಿಯ ನಾಯಕ ಅರ್ ಅಶೋಕ (R Ashoka) ಅವರನ್ನು ವಿರೋಧ ಪಕ್ಷದ ನಾಯಕನಾಗಿ (Leader of Opposition) ಅಯ್ಕೆ ಮಾಡಿದೆ. ಕನಕಪುರದಲ್ಲಿ ಚುನಾವಣೆ ಸೋತಿರುವವರನ್ನು ವಿಪಕ್ಷದ ನಾಯಕ ಮಾಡಲಾಗಿದೆ ಅಂತೆ ಕಾಂಗ್ರೆಸ್ ನಾಯಕರು ಮಾಡಿರುವ ಕಾಮೆಂಟ್ ಅನ್ನು ಮಾಧ್ಯಮದವರು ಅಶೋಕ ಅವರಿಗೆ ತಿಳಿಸಿದಾಗ, ಡಿಕೆ ಶಿವಕುಮಾರ್ (DK Shivakumar) ಅವರು ಕನಕಪುರದಲ್ಲಿ ಸೋತಿಲ್ಲವೇ? 2018ರಲ್ಲಿ ಸಿದ್ದರಾಮಯ್ಯ (Siddaramaiah) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲಿಲ್ಲವೇ? ಮುಖ್ಯಮಂತ್ರಿ  ಚುನಾವಣೆಗಳಲ್ಲಿ ಮೂರ್ನಾಲ್ಕು ಬಾರಿ ಸೋತಿದ್ದಾರೆ. ಆದರೆ ತಾನು ಬಿಜೆಪಿ ಪ್ರಬಲವಾಗಿರದ ಕನಕಪುರ ಕ್ಷೇತ್ರದಲ್ಲಿ ಕೇವಲ ವರಿಷ್ಠರ ಒತ್ತಾಯದ ಮೇರೆಗೆ ಸ್ಪರ್ಧಿಸಿ ಸೋತಿರುವುದಾಗಿ ಹೇಳಿದರು. ಪದ್ಮನಾಭನಾಭನಗರದಿಂದ ಸತತವಾಗಿ 7 ಬಾರಿ ಗೆದ್ದಿರುವುನೆಂದ ಆಶೋಕ ಕಾಂಗ್ರೆಸ್ ನಾಯಕರ ಜೊತೆ ತಮ್ಮನ್ನು ಹೋಲಿಸುವುದು ಬೇಡ, ಅವರ ಮತ್ತ ತಮ್ಮ ಸಿದ್ಧಾಂತಗಳು ಬೇರೆ, ತಮ್ಮದು ದೇಶ ಮೊದಲೆನ್ನುವ ಸಿದ್ಧಾಂತವಾದರೆ ಅವರಿಗೆ ಸೋನಿಯ ಗಾಂಧಿ ಮೊದಲೆನ್ನುವ ಸಿದ್ಧಾಂತ, ತಾವು ಆರಂಭದಿಂದಲೂ ಹೋರಾಟ ಮಾಡಿಕೊಂಡು ಬಂದಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More