Prajadhvani Yatre: ಜನ ತಮ್ಮತ್ತ ಓಡಿಬಂದು ಅಲ್ಲಾಡದ ಹಾಗೆ ಸುತ್ತುವರಿದಾಗ ಸಿದ್ದರಾಮಯ್ಯಗೆ ಬೇಜಾರಾಗದು, ಕೋಪ ಬಾರದು!

ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2023 | 5:33 PM

ಜನ ತಮ್ಮನ್ನು ಮುಕ್ಕುರುವುದನ್ನು ನೋಡಿ ಸಿದ್ದರಾಮಯ್ಯ ಬೇಜಾರು ಕೋಪ ಮಾಡಿಕೊಳ್ಳದೆ ಎಲ್ಲರೊಂದಿಗೆ ನಗುತ್ತಾ ಬೆರೆಯುತ್ತಾರೆ.

ಬಾಗಲಕೋಟೆ: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನಿಸ್ಸಂದೇಹವಾಗಿ ಮಾಸ್ ಲೀಡರ್, ಅವರು ಹೋದೆಡೆಯೆಲ್ಲ ಅದು ಪ್ರೂವ್ ಆಗಿದೆ. ವಿರೋಧ ಪಕ್ಷದ ನಾಯಕ ತಮ್ಮ ಪಕ್ಷದ ಪ್ರಜಾಧ್ವನಿ (Prajadhvani Yatre) ಅಂಗವಾಗಿ ಹೆಲಿಕಾಪ್ಟರ್ ನಲ್ಲಿ ಆಗಮಿಸಿದಾಗ ಅವರಿಗೆಸ ಸಿಕ್ಕ ಸ್ವಾಗತ ಹೇಗಿತ್ತು ಅಂತ ನೋಡಿ. ಸಿದ್ದರಾಮಯ್ಯನವರ ಜೊತೆ ಅವರ ಪರಮಾಪ್ತ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ (Zameer Ahmed) ಇದ್ದರು. ಸಿದ್ದರಾಮಯ್ಯನ ಚಾಪರ್ ನಿಂದ ಇಳಿದು ಬರುತ್ತಿದ್ದಂತೆಯೇ ಜನ ಅವರತ್ತ ಶಿಳ್ಳೆ ಮತ್ತು ಕೇಕೆ ಹಾಕುತ್ತಾ ಓಡಿಬಂದು ಸುತ್ತುವರಿದು ಬಿಡುತ್ತಾರೆ. ಜನ ತಮ್ಮನ್ನು ಮುಕ್ಕುರುವುದನ್ನು ನೋಡಿ ಸಿದ್ದರಾಮಯ್ಯ ಬೇಜಾರು ಕೋಪ ಮಾಡಿಕೊಳ್ಳದೆ ಎಲ್ಲರೊಂದಿಗೆ ನಗುತ್ತಾ ಬೆರೆಯುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Loading...
Unable to load recommendations.
Follow Us