Karnataka Assembly Polls: ಕೆಪಿಸಿಸಿ ಕಚೇರಿ ಮುಂದೆ ತಮ್ಮ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರ ಮೇಲೆ ರೇಗಿದ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ

Updated on: Apr 03, 2023 | 3:47 PM

ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಕಾರಲ್ಲಿ ಬಂದ ತಕ್ಷಣ ಕಾರ್ಯಕರ್ತರೆಲ್ಲ ಕಾರನ್ನು ಸುತ್ತುವರಿದು ಯೋಗೇಶ್ ಬಾಬು ಪರ ಘೋಷಣೆ ಕೂಗುತ್ತಾರೆ.

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಇರುವೆಡೆ ಜನ ಮುತ್ತಿಕೊಳ್ಳೋದು ಸಾಮಾನ್ಯ ಸಂಗತಿ. ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಚೇರಿ ಬಳಿಯೂ ಅದೇ ಆಗಿದ್ದು. ಕಚೇರಿಯ ಮುಂದೆ ಸೇರಿರುವ ಕಾರ್ಯಕರ್ತರ ಸಂಖ್ಯೆ ಗಮನಿಸಿ. ಅವರೆಲ್ಲ ಚಿತ್ರದುರ್ಗ ಜಿಲ್ಲೆಯ ಮೊಣಾಕಾಲ್ಮೂರು ಕ್ಷೇತ್ರದಿಂದ ಬಂದಿದ್ದರು ಅಂತೆನಿಸುತ್ತದೆ. ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಗೆ ಕಾರಲ್ಲಿ ಬಂದ ತಕ್ಷಣ ಕಾರ್ಯಕರ್ತರೆಲ್ಲ ಕಾರನ್ನು ಸುತ್ತುವರಿದು ಯೋಗೇಶ್ ಬಾಬು (Yogesh Babu) ಪರ ಘೋಷಣೆ ಕೂಗುತ್ತಾರೆ ಮತ್ತು ಸಿದ್ದರಾಮಯ್ಯರನ್ನು ಕಚೇರಿಯೊಳಗೆ ಹೋಗದಂತೆ ತಡೆಯುತ್ತಾರೆ. ಆಗಲೇ ತಾಳ್ಮೆ ಕಳೆದುಕೊಳ್ಳುವ ಸಿದ್ದರಾಮಯ್ಯ ಕಾರ್ಯಕರ್ತರನ್ನು ಗದರುತ್ತಾರೆ. ಪ್ರಕಾಶ್ ರಾಠೋಡ್, ಜಮೀರ್ ಅಹ್ಮದ್ ಮೊದಲಾದವರು ಸಿದ್ದರಾಮಯ್ಯ ಜೊತೆ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.