Assembly Polls: ನಾಳೆ ಬಾದಾಮಿಯಲ್ಲಿ ಸಿದ್ದರಾಮಯ್ಯ ರೋಡ್ ಶೋ; ಅಲ್ಲಿಂದಲೇ ಸ್ಪರ್ಧೆ ಅಂತಿಮವೇ?
ಸಿದ್ದರಾಮಯ್ಯ ಶುಕ್ರವಾರ ಬಾದಾಮಿಗೆ ಭೇಟಿ ನೀಡಲಿದ್ದು ಬಾದಾಮಿ-ಕೆರೂರು ಶಾಶ್ವತ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ
ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ಕ್ಷೇತ್ರ ಗೊಂದಲ ಪರಿಹಾರವಾಗಿಲ್ಲ. ಕೋಲಾರ, ವರುಣಾ, ಬಾದಾಮಿ, ಚಾಮುಂಡೇಶ್ವರಿ, ರಾಣೆಬೆನ್ನೂರು-ಹೀಗೆ ಹಲವಾರು ಕ್ಷೇತ್ರಗಳ ಬಗ್ಗೆ ಚರ್ಚೆಯಾಗುತ್ತಿದೆ. ಕೋಲಾರ (Kolar) ರೂಲ್ ಔಟ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಅವರು ಪುನಃ ಬಾದಾಮಿಯಿಂದಲೇ ಸ್ಪರ್ಧಿಸ ಬಹುದು ಅಂತ ಹೇಳಲಾಗುತ್ತಿದೆ. ಏತನ್ಮಧ್ಯೆ, ಸಿದ್ದರಾಮಯ್ಯ ಶುಕ್ರವಾರ ಬಾದಾಮಿಗೆ (Badami) ಭೇಟಿ ನೀಡಲಿದ್ದು ಬಾದಾಮಿ-ಕೆರೂರು ಶಾಶ್ವತ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಬಳಿಕ ಬಾದಾಮಿಯಲ್ಲಿ ರೋಡ್ ಶೋವೊಂದನ್ನು ನಡೆಸಲಿದ್ದಾರೆ. ಅವರ ಭೇಟಿ ಮತ್ತು ರೋಡ್ ಶೋಗಳಿಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us