ಸಿಗಂದೂರು ಚೌಡೇಶ್ವರಿ ಸೇತುವೆ ನಿರ್ಮಾಣದಿಂದ ದೇವಿಯ ಮಹಾಮಂಗಳಾರತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ: ಭಕ್ತೆ

ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2025 | 10:39 AM

ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆಯಾಗಿರುವ ಹಿನ್ನೆಲೆ ಸಿಗಂದೂರುಗೆ ಬಸ್​ಗಳ ಸಂಖ್ಯೆ ಹೆಚ್ಚಿಸಲಾಗಿದೆ ಮತ್ತು ದೇವಸ್ಥಾನ ತೆರೆದಿಡುವ ಸಮಯವನ್ನು 6 ಗಂಟೆಯಿಂದ 9 ಗಂಟೆವರೆಗೆ ವಿಸ್ತರಿಸಲಾಗಿದೆ. ಮೊದಲಾದರೆ ಬೇರೆ ಬೇರೆ ಊರುಗಳಿಂದ ಬರುತ್ತಿದ್ದ ಭಕ್ತಾದಿಗಳಿಗೆ ದೇವಿಯ ಮಹಾಮಂಗಳಾರತಿಯಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ, ಇದನ್ನು ನಿರ್ಮಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು ಎಂದು ಭಕ್ತರು ಹೇಳುತ್ತಾರೆ.

ಶಿವಮೊಗ್ಗ, ಜುಲೈ 16: ಶರಾವತಿ ಹಿನ್ನೀರಿನ ಮೇಲೆ ನಿರ್ಮಾಣವಾಗಿರುವ ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾಗಿದ್ದು ಸ್ಥಳೀಯ ಮತ್ತು ಸುತ್ತಮುತ್ತಲಿನ ಜನರಲ್ಲಿ ಹರ್ಷದ ಹೊಳೆ ಹರಿಸಿದೆ. ಮೊದಲಾದರೆ ಸಿಗಂದೂರು ಚೌಡೇಶ್ವರಿಯ ದರ್ಶನ ಪಡೆಯಬೇಕಾದರೆ ಸುತ್ತುಬಳಸಿ ಬರಬೇಕಾಗುತಿತ್ತು, ಅದರೆ ಈಗ ಬಹಳ ಬೇಗ ಬಂದು ಬಿಡಬಹುದು ಎಂದು ತಾಯಿಯ ದರ್ಶನಕ್ಕೆ ಶಿವಮೊಗ್ಗದಿಂದ ಬಂದಿರುವ ಕುಟುಂಬದ ಮಹಿಳಾ ಸದಸ್ಯರೊಬ್ಬರು ಹೇಳುತ್ತಾರೆ. ಸೇತುವೆಯನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ, ಅದರ ಮೇಲಿಂದ ಬರುವಾಗ ಯಾವುದೋ ಬೇರೆ ದೇಶದಲ್ಲಿರುವ ಭಾವನೆ ಹುಟ್ಟುತ್ತದೆ ಸೇತುವೆ ಮುಖಾಂತರ ದೇವಸ್ಥಾನಕ್ಕೆ ಬರೋದು ವಿಶಿಷ್ಟ ಅನುಭೂತಿ ನೀಡುತ್ತದೆ ಎಂದು ಅವರು ಹೇಳುತ್ತಾರೆ

ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆ; ನಿತಿನ್ ಗಡ್ಕರಿ ವಿರುದ್ಧ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us