ಜವಾಬ್ದಾರಿಯುತ ಸ್ಥಾನದಲ್ಲಿರುವ ಜಮೀರ್ ಅಹ್ಮದ್ ಮಾತಾಡುವಾಗ ಎಚ್ಚರವಹಿಸಬೇಕು: ಬಿವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

|

Updated on: Nov 17, 2023 | 12:14 PM

ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಸಭಾಧ್ಯಕ್ಷನ ಸ್ಥಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸಲ್ಲಿಸುತ್ತಾರೆಯೇ ಹೊರತು ವ್ಯಕ್ತಿಗಲ್ಲ ಎಂದು ಅವರು ಹೇಳಿದರು. ಜಮೀರ್ ಅವರಿಗೆ ಯಾವುದೇ ಸಮುದಾಯದ ಉಸ್ತುವಾರಿ ವಹಿಸಿಲ್ಲ, ಅವರು ತಮ್ಮ ಅಂತರಾಳದ ಮಾತರುಗಳನ್ನಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು: ಮುಸ್ಲಿಂ ಸಮುದಾಯದ ಸಭೆಯೊಂದರಲ್ಲಿ ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರು ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಅವರಿಗೆ ಬಿಜೆಪಿಯ ಹಿರಿಯ ನಾಯಕರು ಸಹ ತಲೆಬಗ್ಗಿಸಿ ನಮಸ್ಕಾರ ಸಾರ್ ಎನ್ನಬೇಕು ಅಂತ ಹೇಳಿದ್ದು ತೀವ್ರ ಸ್ವರೂಪದ ಟೀಕೆಗೆ ಗುರಿಯಾಗಿದೆ. ಅವರಾಡಿದ ಮಾತಿಗೆ ಇಂದು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಒಬ್ಬ ಮಂತ್ರಿ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಇಂಥ ಮಾತನ್ನಾಡಿರುವುದು ದುರದೃಷ್ಟಕರ ಮತ್ತು ಖಂಡನೀಯ ಎಂದರು. ವಿಧಾನ ಸಭೆಯಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದವರು ಸಭಾಧ್ಯಕ್ಷನ ಸ್ಥಾನಕ್ಕೆ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಸಲ್ಲಿಸುತ್ತಾರೆಯೇ ಹೊರತು ವ್ಯಕ್ತಿಗಲ್ಲ ಎಂದು ಅವರು ಹೇಳಿದರು. ಜಮೀರ್ ಅವರಿಗೆ ಯಾವುದೇ ಸಮುದಾಯದ ಉಸ್ತುವಾರಿ ವಹಿಸಿಲ್ಲ, ಅವರು ತಮ್ಮ ಅಂತರಾಳದ ಮಾತರುಗಳನ್ನಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕನಿಷ್ಟ ಇನ್ನು ಮುಂದೆಯಾದರೂ ಅವರು ಮಾತಾಡುವ ಮೊದಲು ಯೋಚಿಸಲಿ ಮತ್ತು ಎಚ್ಚರಿಕೆಯಿಂದ ಮಾತಾಡಲಿ ಎಂದು ವಿಜಯೇಂದ್ರ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on