Temple Tour: ಉದ್ಭವ ಮೂರ್ತಿಯಾಗಿ ನಿಂತ ಶಿವ

| Updated By: sandhya thejappa

Updated on: Oct 06, 2021 | 10:56 AM

ಪ್ರತಿ ಸೋಮವಾರ ಆ ಕ್ಷೇತ್ರದತ್ತ ಭಕ್ತ ದಂಡು ಹರಿದುಬರುತ್ತದೆ. ಪ್ರತಿ ಸೋಮವಾರ ಆ ಆಲಯದಲ್ಲಿರುವ ಮೂರ್ತಿಗೆ ಜನರು ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಾರೆ.

ನಾಡಿನ ಸಾಕಷ್ಟು ದೇವಾಲಯಗಳು ಉದ್ಬವ ಮೂರ್ತಿಗಳಿಂದಲೇ ಪ್ರಸಿದ್ಧಿ ಪಡೆದಿದೆ. ಅಂತ ಸಾಲಿಗೆ ಸೇರುವ ದೇವಾಲಯ ಅಂದ್ರೆ ರಾಯಚೂರಿನ ಚಂದ್ರಮೌಳೀಶ್ವರ ದೇವಾಲಯ. ಚಂದ್ರಮೌಳೀಶ್ವರ ದೇಗುವ ಸಾಕಷ್ಟು ವಿಶೇಷತೆಗಳನ್ನ ಒಳಗೊಂಡು ಭಕ್ತಾದಿಗಳನ್ನ ಸೆಳೆಯುತ್ತಿದೆ. ರಾಯಚೂರು ಜಿಲ್ಲೆ ಸಾಮಾನ್ಯವಾಗಿ ಬಿಸಿಲು ಮತ್ತು ಬರದ ನಾಡಾಗಿ ಗುರುತಿಸಿಕೊಂಡಿದೆ. ತುಂಗಭದ್ರೆಯ ತೀರದಲ್ಲಿರುವ ರಾಯಚೂರಿನಲ್ಲಿ ಪರಶಿವನ ಮಹಾ ಆಲಯವೊಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಪ್ರತಿ ಸೋಮವಾರ ಆ ಕ್ಷೇತ್ರದತ್ತ ಭಕ್ತ ದಂಡು ಹರಿದುಬರುತ್ತದೆ. ಪ್ರತಿ ಸೋಮವಾರ ಆ ಆಲಯದಲ್ಲಿರುವ ಮೂರ್ತಿಗೆ ಜನರು ವಿಶೇಷ ಪೂಜೆ, ಹರಕೆ ಸಲ್ಲಿಸುತ್ತಾರೆ. ಅಂದಹಾಗೆ ರಾಯಚೂರಿನ ಮನೆ ಮನೆಗೂ ಭಕ್ತರು ಇರುವಂತಾ ಈ ಮಹಾಮಹಿಮ ಈಶ್ವರನನ್ನ ಜನರು ನೆನೆಯೋದು ಹೀಗೆ ನೋಡಿ..

Published On - 8:54 am, Wed, 6 October 21

Follow us on