ಜನ, ಜನುವಾರುಗಳ ಬಿರುಬಿಸಿಲಿನಲ್ಲಿ ನೀರಿನ ದಾಹ ತಣಿಸುತ್ತಿರುವ ಡಿಬಾಸ್ ಅಭಿಮಾನಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾದಿಯನ್ನೇ ಅಭಿಮಾನಿಗಳು ಫಾಲೋ ಮಾಡ್ತಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇದೀಗ ವೈಟ್ ಫೀಲ್ಡ್ ನಲ್ಲಿರುವ ಮುರಳೀಧರ್ ಅನ್ನೋ ಡಿಬಾಸ್ ಅಭಿಮಾನಿ ಕಳೆದ ಕೆಲ ವರ್ಷಗಳಿಂದ ತಮ್ಮದೇ ಟ್ಯಾಂಕರ್ನಲ್ಲಿ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಿಸುವ ಮನೆಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡ್ತಿದ್ದಾರೆ. ಜತೆ ಹಸು, ಕರು, ಪಕ್ಷಿಗಳಿಗೂ ಸಣ್ಣದಾದ ಸಿಮೆಂಟ್ ಕಟ್ಟೆ ಕಟ್ಟಿಸಿ ಮೂಕಪ್ರಾಣಿಗಳ ನೀರಿನ ದಾಹ ತೀರಿಸ್ತಿದ್ದಾರೆ.
Loading...
Unable to load recommendations.
Follow Us

