ಬೆಂಗಳೂರಿಗೆ ಆಗಮಿಸಿದ ತಲೈವಾ ರಜಿನಿಕಾಂತ್, ಡಾ ಕೆ ಸುಧಾಕರ್ ಮತ್ತು ಮುನಿರತ್ನರಿಂದ ಆದರದ ಸ್ವಾಗತ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 01, 2022 | 1:28 PM

ಕರ್ನಾಟಕ ಸರ್ಕಾರದ ಪರವಾಗಿ ಸಚಿವರಾದ ಡಾ ಕೆ ಸುಧಾಕರ್ ಮತ್ತು ಮುನಿರತ್ನ ನಾಯ್ಡು ಅವರು ರಜಿನಿಕಾಂತ್ ಅವರನ್ನು ಸ್ವಾಗತಿಸಿದರು.

ಬೆಂಗಳೂರು: ತಮಿಳುನಾಡಲ್ಲಿ ತಮ್ಮ ಅಭಿಮಾನಿಗಳಿಂದ ತಲೈವಾ ಎಂದು ಕರೆಸಿಕೊಳ್ಳುವ ಸೂಪರ್ ಸ್ಟಾರ್ ರಜನೀಕಾಂತ್ (Rajnikanth) ಅವರು ಇಂದು ಪುನೀತ್ ರಾಜಕುಮಾರ (Puneeth Rajkumar) ಅವರಿಗೆ ಕರ್ನಾಟಕ ಸರ್ಕಾರ ಮರಣೋತ್ತರವಾಗಿ ಕೊಡಮಾಡಲಿರುವ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ಹೆಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಈಗ್ಗೆ ಕೆಲ ನಿಮಿಷಗಳ ಮುಂಚೆ ಬಂದಿಳಿದರು. ಕರ್ನಾಟಕ ಸರ್ಕಾರದ ಪರವಾಗಿ ಸಚಿವರಾದ ಡಾ ಕೆ ಸುಧಾಕರ್ (Dr K Sudhakar) ಮತ್ತು ಮುನಿರತ್ನ ನಾಯ್ಡು (Munirathna Naidu) ಅವರು ಸ್ವಾಗತಿಸಿದರು. 71-ವರ್ಷ-ವಯಸ್ಸಿನ ತಲೈವಾ ತನ್ನ ಎಂದಿನ ಲವಲವಿಕೆಯೊಂದಿಗೆ ಆಗಮಿಸಿದರು.

Follow us on