Chitradurga: ಸಿಎಂ ಸಿದ್ದರಾಮಯ್ಯ ಬರ್ತಡೇ ದಿನವೇ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಕೋಟೆನಾಡಿನ ಜನ; ಕಾರಣ ಇಲ್ಲಿದೆ ನೋಡಿ
ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಮೂರು ದಿನ ಕಳೆದರೂ ಯಾರೊಬ್ಬ ಶಾಸಕ, ಸಚಿವರುಗಳು ಸ್ಥಳಕ್ಕೆ ಬಂದಿಲ್ಲವೆಂದು ಹುಟ್ಟು ಹಬ್ಬದ ದಿನವೇ ಸಿಎಂ ವಿರುದ್ದ ಘೋಷಣೆ ಕೂಗಿದ್ದಾರೆ.
ಚಿತ್ರದುರ್ಗ, ಆ.3: ಕಲುಷಿತ ನೀರು ಸೇವಿಸಿ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಕವಾಡಿಗರಹಟ್ಟಿ ಬಡಾವಣೆ ನಿವಾಸಿಗಳು ಧರಣಿ ನಡೆಸಿದ್ದಾರೆ. ಘಟನೆ ನಡೆದು 3 ದಿನ ಕಳೆದರೂ ಚಿತ್ರದುರ್ಗ(Chitradurga) ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ನವರು ಸ್ಥಳಕ್ಕೆ ಬಾರದ ಹಿನ್ನಲೆ ಅವರ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಜಾತಿ ವೈಷಮ್ಯದ ಕಾರಣಕ್ಕೆ ಸವರ್ಣಿಯರು ನೀರಿನ ಟ್ಯಾಂಕಿಯಲ್ಲಿ ವಿಷ ಬೆರೆಸಿದ್ದಾರೆಂದು ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ. ಇಷ್ಟೇಲ್ಲಾ ದೊಡ್ಡ ಘಟನೆ ನಡೆದರೂ ದಲಿತ ಸಮುದಾಯದ ಶಾಸಕರು, ಸಚಿವರು ಸಹ ಸಹ ಬಂದಿಲ್ಲವೆಂದು ಕವಾಡಿಗರಹಟ್ಟಿ ಬಳಿ ರಸ್ತೆ ತಡೆದು ಬಡಾವಣೆ ನಿವಾಸಿಗಳಿಂದ ಧರಣಿ ನಡೆಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us