ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾಲಯದ ಸಿಬ್ಬಂದಿ

ಕಿರಣ್ ಹನುಮಂತ್​ ಮಾದಾರ್

Updated on: Sep 08, 2024 | 5:07 PM

ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.

ಬಾಗಲಕೋಟೆ, ಸೆ.08: ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.  20 ವಿದ್ಯಾರ್ಥಿಗಳಿಂದ ಒಂದು ವಾರಗಳ ಕಾಲ ನಿರಂತರ ಶ್ರಮದಿಂದ ಈ ಆಕರ್ಷಕ ಗಣಪ ಅರಳಿ ನಿಂತಿದೆ. ಇನ್ನು ಇವರು ಸತತ 30 ವರ್ಷದಿಂದ ನಿರುಪಯುಕ್ತ ವಸ್ತುಗಳಲ್ಲೇ ಗಣೇಶ ನಿರ್ಮಾಣ ಮಾಡಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Kiran Hanumant Madar

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.