ವೇಸ್ಟ್ ಪ್ಲಾಸ್ಟಿಕ್ ಬಳಸಿ ಗಣೇಶನಿಗೆ ರೂಪ ಕೊಟ್ಟ ಚಿತ್ರಕಲಾ ವಿದ್ಯಾಲಯದ ಸಿಬ್ಬಂದಿ

ಕಿರಣ್ ಹನುಮಂತ್​ ಮಾದಾರ್

Updated on: Sep 08, 2024 | 5:07 PM

ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.

ಬಾಗಲಕೋಟೆ, ಸೆ.08: ಗಣೇಶ ಹಬ್ಬದ ಸಂಭ್ರಮದಲ್ಲೂ ಕಸದಿಂದ ರಸ ನಿಯಮ ಅನುಸರಿಸಿದ ವಿದ್ಯಾರ್ಥಿಗಳು, ಪ್ಲಾಸ್ಟಿಕ್ ಪೈಪ್​ನಲ್ಲಿ ಗಣೇಶನ ಅನಾವರಣ ಮಾಡಿದ್ದಾರೆ. ಹೌದು, ನಿಂತ ಭಂಗಿಯಲ್ಲಿರುವ ಇಡೀ ಗಣೇಶನನ್ನ ಬಾಗಲಕೋಟೆ ಜಿಲ್ಲೆಯ ಇಳಕಲ್(Ilkal) ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿರುಪಯುಕ್ತ ಪೈಪ್​ಗಳಿಂದ ನಿರ್ಮಾಣ ಮಾಡಿದ್ದಾರೆ.  20 ವಿದ್ಯಾರ್ಥಿಗಳಿಂದ ಒಂದು ವಾರಗಳ ಕಾಲ ನಿರಂತರ ಶ್ರಮದಿಂದ ಈ ಆಕರ್ಷಕ ಗಣಪ ಅರಳಿ ನಿಂತಿದೆ. ಇನ್ನು ಇವರು ಸತತ 30 ವರ್ಷದಿಂದ ನಿರುಪಯುಕ್ತ ವಸ್ತುಗಳಲ್ಲೇ ಗಣೇಶ ನಿರ್ಮಾಣ ಮಾಡಿ ಪ್ರತಿಷ್ಟಾಪನೆ ಮಾಡುತ್ತಾ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us