‘ಇವತ್ತು ರಿಸಲ್ಟ್ ನಮ್ಮದೇ’ ಎಂದಿದ್ದಕ್ಕೆ ಖುಷಿಯಿಂದ ನಕ್ಕ ತ್ರಿಷಾ

Updated on: May 04, 2026 | 11:35 AM

ತ್ರಿಷಾ ಕೃಷ್ಣನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ. ಅವರು ಇಂದು ಜನ್ಮದಿನ ಹಿನ್ನೆಯಲ್ಲಿ ತ್ರಿಷಾ ಅವರು ತಿರುಪತಿಗೆ ಭೇಟಿ ನೀಡಿದ್ದರು. ಈಗ ಅವರ ಆಪ್ತ ವಿಜಯ್ರ ಪಕ್ಷ ಮುನ್ನಡೆ ಸಾಧಿಸುತ್ತಿದೆ. ಹೀಗಿರುವಾಗಲೇ ವಿಜಯ್ ಅವರು ಸಿಎಂ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ತ್ರಿಷಾ ಕೃಷ್ಣನ್ ಅವರಿಗೆ ಇಂದು (ಮೇ 4) ಜನ್ಮದಿನ. ಹೀಗಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ. ದೇವಸ್ಥಾನ ಭೇಟಿಯ ಹಿಂದೆ ಇನ್ನೂ ಒಂದು ಕಾರಣ ಇರಬಹುದು ಎಂಬುದು ಅಭಿಮಾನಿಗಳ ಊಹೆ. ಅದೇನೆಂದರೆ ತ್ರಿಷಾ ಅವರು ವಿಜಯ್ ಜೊತೆ ಆಪ್ತತೆ ಹೊಂದಿದ್ದಾರೆ. ಹೀಗಾಗಿ, ವಿಜಯ್ ಅವರಿಗೆ ರಾಜಕೀಯ ದೃಷ್ಟಿಯಿಂದ ಪ್ರಮುಖ ದಿನ. ತಮಿಳುನಾಡು ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಕೋರುವ ಉದ್ದೇಶವೂ ಅವರಿಗೆ ಇದೆ ಎನ್ನಲಾಗಿದೆ. ದೇವಸ್ಥಾನದಲ್ಲಿ ‘ಮೇಡಂ ಇವತ್ತು ರಿಸಲ್ಟ್ ಪಕ್ಕಾ ಮನದೇ’ (ಮೇಡಂ, ಇಂದು ಫಲಿತಾಂಶ ಖಂಡಿತ ನಮ್ಮದೇ ಪಕ್ಕಾ) ಎಂದರು. ಆಗ ತ್ರಿಷಾ ನಕ್ಕರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us