ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

Updated on: Jan 18, 2025 | 10:15 AM

ಉಮಾಶ್ರೀ ಅವರು ಧಾರಾವಾಹಿಗಳಲ್ಲಿ 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಮಾಡಿದ್ದಾರೆ. ಈಗ ಅವರು ಹೊನ್ನಾವರದಲ್ಲಿ ಬಂದು ಯಕ್ಷಗಾನ ಮಾಡಿದ್ದಾರೆ. ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು ಎಂಬುದು ವಿಶೇಷ. ಈ ಬಗ್ಗೆ ಅವರು ಮಾತನಾಡಿದ್ದಾರೆ. ಸಂತೋಷವನ್ನು ಅವರು ವಿವರಿಸಿದ್ದಾರೆ.

ನಟಿ ಉಮಾಶ್ರೀ ಅವರು ಬಣ್ಣದ ಲೋಕಕ್ಕೆ ಹೊಸಬರಲ್ಲ. ಅವರಿಗೆ ಹಲವು ದಶಕಗಳ ಅನುಭವ ಇದೆ. ನಾನಾ ರೀತಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಅವರು ಯಕ್ಷಗಾನದಲ್ಲಿ ನಟಿಸಿದ್ದಾರೆ. ಅದೂ ರಾಮಚಂದ್ರ ಚಿಟ್ಟಾಣಿಯವರ ಆಸೆ ಈಡೇರಿಸಲು. ಹೊನ್ನಾವರದಲ್ಲಿ ನಡೆದ ಯಕ್ಷಗಾನದಲ್ಲಿ ಅವರು ಮಂತರೆಯ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಯಕ್ಷಗಾನ ಮಾಡಲು ಕೋರಿದರು. ನಾನು ಇದನ್ನು ಎಂದಿಗೂ ಮಾಡಿಲ್ಲ. ಕಷ್ಟ ಆಗುತ್ತದೆ, ಮಾಡುವುದಿಲ್ಲ ಎಂದೆ. ರಾಮಚಂದ್ರ ಚಿಟ್ಟಾಣಿಯವರು ನನ್ನ ಬಳಿ ಮಂತರೆಯ ಪಾತ್ರ ಮಾಡಿಸಬೇಕು ಎಂದು ಹೇಳಿದ್ದರಂತೆ. ಈ ಮಾತನ್ನು ಸುಬ್ರಮಣ್ಯ ಚಿಟ್ಟಾಣಿಯವರು ನನಗೆ ಹೇಳಿದರು. ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಮಾಡಿದೆ’ ಎಂದಿದ್ದಾರೆ ಉಮಾಶ್ರೀ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 18, 2025 08:24 AM
Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More