ಆ ಒಂದು ಅಭ್ಯಾಸ ರೂಢಿಸಿಕೊಳ್ಳಿ ಅದರಿಂದಲೇ ನಾನು ಈ ಹಂತಕ್ಕೆ ಏರಿದ್ದು: ಉಪೇಂದ್ರ

Updated on: Nov 02, 2023 | 10:56 PM

Upendra: ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಉಪೇಂದ್ರ ವಿದ್ಯಾರ್ಥಿಗಳಿಗೆ ಕೆಲವು ಸ್ಪೂರ್ತಿ ತುಂಬುವ ಮಾತುಗಳನ್ನು ಹೇಳಿದರು. ಜೀವನದಲ್ಲಿ ಒಂದು ಅಭ್ಯಾಸವನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾಲೇಜು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ, ನಿರ್ದೇಶಕ ಉಪೇಂದ್ರ (Upendra) ತಮ್ಮ ವಾಕ್​ಚಾತುರ್ಯದಿಂದ ಕಾಲೇಜು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಪ್ರಯತ್ನ ಮಾಡಿದರು. ಜೀವನದಲ್ಲಿ ನೋ ಎನ್ನುವುದನ್ನು ಕಲಿತುಕೊಳ್ಳಿ, ಎಸ್​ ಬಾಸ್ ಎನ್ನುತ್ತಾ ಇರಬೇಡಿ ಎಂದರು. ನೋ ಎನ್ನುವುದನ್ನು ಕಲಿತವನು ಏನನ್ನಾದರೂ ಸಾಧಿಸಲು ಸಾಧ್ಯ. ಎಸ್ ಎನ್ನುತ್ತಾ ಇದ್ದರೆ ಇದ್ದಲ್ಲಿಯೇ ಇರುತ್ತಾರೆ ಎಂದರು. ಅಲ್ಲದೆ ತಾವು ತಮ್ಮ ಕಾಲೇಜು ಸಮಯದಲ್ಲಿ ನೋ ಎನ್ನುವುದನ್ನು ಕಲಿತುಕೊಂಡೆ ಅದರಿಂದಲೇ ಈ ಹಂತಕ್ಕೆ ಬರಲು ಸಾಧ್ಯವಾಯಿತು ಎಂದರು. ಅಲ್ಲದೆ ತಮ್ಮ ‘ಯುಐ’ ಸಿನಿಮಾ ಬಗ್ಗೆ ಮಾತನಾಡಿ, ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಬಗ್ಗೆ ಸಿನಿಮಾ ಮಾಡಿದ್ದೇವೆ. ಟೀಸರ್​ನಲ್ಲಿ ಕತ್ತಲು ಇತ್ತು ಆದರೆ ಸಿನಿಮಾ ಹಾಗಿರುವುದಿಲ್ಲ” ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 02, 2023 10:52 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More