ಸ್ಪಂದನಾ ಉತ್ತರ ಕ್ರಿಯೆಗೆ ಮಗನನ್ನು ಕರೆದುಕೊಂಡು ಬಂದ ವಿಜಯ್​ ರಾಘವೇಂದ್ರ

|

Updated on: Aug 16, 2023 | 12:04 PM

ಸ್ಪಂದನಾ ವಿಜಯ್​ ರಾಘವೇಂದ್ರ ಅವರ ತಂದೆ ಬಿ.ಕೆ. ಶಿವರಾಂ ನಿವಾಸದಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್​ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು ವಿಜಯ್​ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ.

ಸ್ಪಂದನಾ ಅವರ ನಿಧನದಿಂದ ವಿಜಯ್​ ರಾಘವೇಂದ್ರ (Vijay Raghavendra) ಕುಟುಂಬದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಇಂದು (ಆಗಸ್ಟ್ 16) ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಕಬಡ್ಡಿ ಕ್ಲಬ್​ ಮೈದಾನದಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ (Spandana Vijay Raghavendra) ಅವರ ಉತ್ತರ ಕ್ರಿಯೆ ನಡೆಯುತ್ತಿದೆ. ಸ್ಪಂದನಾ ತಂದೆ ಬಿ.ಕೆ. ಶಿವರಾಂ ಅವರ ಮನೆಯಲ್ಲಿ ಶಾಂತಿಹೋಮ ನಡೆಯುತ್ತಿದೆ. ವಿಜಯ್​ ರಾಘವೇಂದ್ರ ಅವರ ಕುಟುಂಬದವರು ಇದರಲ್ಲಿ ಭಾಗಿ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ರ ಶೌರ್ಯನನ್ನು (Vijay Raghavendra Son Shaurya) ವಿಜಯ್​ ರಾಘವೇಂದ್ರ ಕರೆದುಕೊಂಡು ಬಂದಿದ್ದಾರೆ. ಅಂದಾಜು 4 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on