Tumakuru: ಶಾಸಕ ಎಸ್ ಆರ್ ಶ್ರೀನಿವಾಸ ಕಳಿಸಿದ ಕುಕ್ಕರನ್ನು ತಿರಸ್ಕರಿಸಿ ತಂದವರಿಗೆ ಮಂಗಳಾರತಿ ಮಾಡಿದ ಗುಬ್ಬಿ ಕ್ಷೇತ್ರದ ಮತದಾರ

|

Updated on: Feb 18, 2023 | 3:56 PM

ಕಷ್ಟದ ಸಮಯದಲ್ಲಿ ನೆರವಾಗದ ಶಾಸಕ ಚುನಾವಣೆ ಸಮಯದಲ್ಲಿ ಕುಕ್ಕರ್ ಕಳಿಸಿದರೆ ಅದನ್ನು ತಗೋಬೇಕಾ? ನಮಗೇನೂ ಬೇಕಿಲ್ಲ, ನಿಮ್ಮ ಅರಿಶಿಣ ಕುಂಕುಮ ಕೂಡ ಬೇಡ ಅಂತ ಗದರುತ್ತಾ ಅಲ್ಲಿಂದ ಸಾಗಹಾಕುತ್ತಾರೆ.

ತುಮಕೂರು: ಕುಕ್ಕರ್, ಮಿಕ್ಸರ್ ಗ್ರೈಂಡರ್, ಸೀರೆಗಳನ್ನು ಹಂಚುವ ಕಾರ್ಯ ಎಲ್ಲ ಪಕ್ಷದ ಶಾಸಕರು, ನಾಯಕರು, ಉಚ್ಚಾಟಿತ ನಾಯಕರು ಶುರವಿಟ್ಟುಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಹೊರದೊಬ್ಬಲ್ಪಟ್ಟಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ (SR Srinivas) ಶಿವರಾತ್ರಿಯಂದು ತಮ್ಮ ಕ್ಷೇತ್ರದಲ್ಲಿ ಕುಕ್ಕರ್ (cooker) ಹಂಚಲು ಹೋಗಿ ಮತದಾರರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ತಲೆ ಮೇಲೆ ಹ್ಯಾಟು ಧರಿಸಿ ವಿದೇಶಿ ಮಹಿಳೆಯಂತೆ ಕಾಣುವ ಕಾರ್ಯಕರ್ತೆಯೊಬ್ಬರು (female worker) ಶಾಸಕರ ಪರವಾಗಿ ಸ್ಥಳೀಯ ಕಾರ್ಯಕರ್ತರೊಂದಿಗೆ ಕುಕ್ಕರ್ ಹಂಚುತ್ತಾ ಈ ಮನೆಗೆ ಬಂದಾಗ ಅದರಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬರು, ತಮ್ಮ ಕಷ್ಟದ ಸಮಯದಲ್ಲಿ ನೆರವಾಗದ ಶಾಸಕ ಚುನಾವಣೆ ಸಮಯದಲ್ಲಿ ಕುಕ್ಕರ್ ಕಳಿಸಿದರೆ ಅದನ್ನು ತಗೋಬೇಕಾ? ನಮಗೇನೂ ಬೇಕಿಲ್ಲ, ನಿಮ್ಮ ಅರಿಶಿಣ ಕುಂಕುಮ ಕೂಡ ಬೇಡ ಅಂತ ಗದರುತ್ತಾ ಅಲ್ಲಿಂದ ಸಾಗಹಾಕುತ್ತಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on